ಮೈಸೂರು: ತಾಲ್ಲೂಕಿನ ವರಕೋಡು ಗ್ರಾಮದ ಮೈಸೂರು–ತಿ.ನರಸೀಪುರ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ – ಗೂಡ್ಸ್ ಆಟೊ ನಡುವೆ ಭಾನುವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಿ.ನರಸೀಪುರದ ನಿವಾಸಿಗಳಾದ ಇಮ್ರಾನ್ (30), ಯಾಸ್ಮೀನ್ ತಾಜ್ (28) ಹಾಗೂ ಅಫ್ನಾನ್ (3) ಮೃತಪಟ್ಟವರು. ಅಕ್ಬರ್ ಪಾಷಾ, ಬಾಬು ಮತ್ತು ಶಬಾನಾ ಗಾಯಗೊಂಡವರು.
ತಿ.ನರಸೀಪುರದಿಂದ ಮೈಸೂರಿನತ್ತ ಬರುತ್ತಿದ್ದ ಆಟೊ ಹಾಗೂ ಮೈಸೂರಿನಿಂದ ತಿ.ನರಸೀಪುರ ಕಡೆಗೆ ಹೋಗುತ್ತಿದ್ದ ಬಸ್, ವರಕೋಡು ಗ್ರಾಮದ ಪೇಪರ್ ಮಿಲ್ ಸಮೀಪದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ.