<p><strong>ಮೈಸೂರು:</strong> ನಗರದಲ್ಲಿ 7 ಕಡೆ ಸರಗಳ್ಳತನ ನಡೆದ ಬಳಿಕ ಎಚ್ಚೆತ್ತ ಪೊಲೀಸರು ಸರಗಳ್ಳತನ ತಡೆಗೆ ಶುಕ್ರವಾರದಿಂದಲೇ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.</p>.<p>‘ಫಾಸ್ಟ್ಟ್ರ್ಯಾಕ್’ ಹಾಗೂ ‘ಶುಭೋದಯ’ ಎಂಬ ಹೆಸರಿನ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 10 ಮತ್ತು ಸಂಜೆ 4.30ರಿಂದ ರಾತ್ರಿ 10 ಗಂಟೆಯವರೆಗೆ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.</p>.<p>ನಗರದ 94 ಕಡೆ ‘ಸ್ಟಾಟಿಂಗ್ ಪಾಯಿಂಟ್’ಗಳನ್ನು ಗುರುತಿಸಿದ್ದು, ಇಲ್ಲಿ 160 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 40 ‘ಗರುಡ’ ವಾಹನಗಳಿಂದ ಪಹರೆ ನಡೆಸಲಿದ್ದು, ಇವುಗಳಲ್ಲಿ 6 ಮಹಿಳಾ ಸಿಬ್ಬಂದಿ ಇರುವ ‘ಗರುಡ’ ವಾಹನಗಳೇ ಇವೆ. ಜತೆಗೆ, 25 ‘ಚೀತಾ’ ವಾಹನಗಳಲ್ಲೂ ಪೊಲೀಸರು ಗಸ್ತು ನಡೆಸುತ್ತಿದ್ದಾರೆ.</p>.<p>ಸಂಚಾರ ಪೊಲೀಸರನ್ನು 30 ಸ್ಥಳಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ನಂಬರ್ ಪ್ಲೇಟ್ ಇಲ್ಲದ 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬೆಳಿಗ್ಗೆ 6 ಗಂಟೆಯಿಂದಲೇ ಉದ್ಯಾನಗಳು, ವಾಯುವಿಹಾರ ಮಾಡುವಂತಹ ಜಾಗಗಳು, ಕ್ರೀಡಾಂಗಣಗಳು, ದೇವಸ್ಥಾನಗಳು, ಹಾಲಿನ ಅಂಗಡಿಗಳ ಬಳಿ ಪೊಲೀಸರು ಗಸ್ತು ನಡೆಸುತ್ತಿದ್ದಾರೆ.</p>.<p>ಮತ್ತೆ ಸಂಜೆ 4 ಗಂಟೆ ಕಾರ್ಯಾಚರಣೆ ಆರಂಭಿಸುವ ಪೊಲೀಸರು ರಾತ್ರಿ 10 ಗಂಟೆಯವರೆಗೂ ವಿಶೇಷ ನಿಗಾ ಇರಿಸುತ್ತಿದ್ದಾರೆ.</p>.<p>ಧ್ವನಿವರ್ಧಕಗಳ ಮೂಲಕ ಪ್ರಚಾರ:</p>.<p>ಧ್ವನಿವರ್ಧಕಗಳ ಮೂಲಕ ಸರಗಳ್ಳತನ ಕುರಿತು ಪೊಲೀಸರು ಮಾಹಿತಿ ನೀಡುವ ಕೆಲಸ ಆರಂಭಿಸಿದ್ದಾರೆ. ವಿಶೇಷವಾಗಿ ಮಹಿಳಾ ಗರುಡ ಪೊಲೀಸರು ಧ್ವನಿವರ್ಧಕದಲ್ಲಿ ಸರವನ್ನು ಜೋಪಾನವಾಗಿಟ್ಟುಕೊಳ್ಳುವ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಣ್ಣಿಗೆ ಕುಕ್ಕುವಂತಹ ಆಭರಣ ಧರಿಸಿ ಹೋಗುತ್ತಿರುವ ಮಹಿಳೆಯರನ್ನು ತಡೆದು ಅವರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.</p>.<p>ಮತ್ತೆರಡು ಸರಗಳ್ಳತನ</p>.<p>ನಗರದಲ್ಲಿ ಗುರುವಾರ ಕೇವಲ 5 ಸರಗಳ್ಳತನಗಳು ಮಾತ್ರ ನಡೆದಿಲ್ಲ, ಒಟ್ಟು 7 ಪ್ರಕರಣಗಳು ನಡೆದಿವೆ. ಸರ ಕಳೆದುಕೊಂಡ ಇನ್ನಿಬ್ಬರು ಮಹಿಳೆಯರು ತಡವಾಗಿ ದೂರು ನೀಡಿದ್ದಾರೆ.</p>.<p>ವಿದ್ಯಾರಣ್ಯಪುರಂನ ರಾಮಕೃಷ್ಣ ರಸ್ತೆಯ ಶಂಭುಲಿಂಗೇಶ್ವರ ಸ್ಟೋರ್ ಬಳಿ ಗೀತಾ ಎಂಬುವವರು ರಾತ್ರಿ 8.50ರಲ್ಲಿ ನಡೆದು ಬರುತ್ತಿದ್ದಾಗ ಎದುರಿನಿಂದ ಬೈಕ್ನಲ್ಲಿ ಬಂದ ಇಬ್ಬರಲ್ಲಿ ಒಬ್ಬಾತ 32 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.</p>.<p>ಇದೇ ಬಡಾವಣೆಯ ರಾಘವೇಂದ್ರ ಮಠದ ಹತ್ತಿರ ಆರ್.ನಾಗರತ್ನಮ್ಮ ಅವರು ರಾತ್ರಿ 8.30ರಲ್ಲಿ ನಡೆದು ಹೋಗುವಾಗ ಬೈಕ್ನಲ್ಲಿ ಬಂದ ಇಬ್ಬರು 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಗುರುವಾರ ಒಂದೇ ದಿನ ವಿದ್ಯಾರಣ್ಯಾಪುರಂ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 4 ಸರಗಳ್ಳತನಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದಲ್ಲಿ 7 ಕಡೆ ಸರಗಳ್ಳತನ ನಡೆದ ಬಳಿಕ ಎಚ್ಚೆತ್ತ ಪೊಲೀಸರು ಸರಗಳ್ಳತನ ತಡೆಗೆ ಶುಕ್ರವಾರದಿಂದಲೇ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.</p>.<p>‘ಫಾಸ್ಟ್ಟ್ರ್ಯಾಕ್’ ಹಾಗೂ ‘ಶುಭೋದಯ’ ಎಂಬ ಹೆಸರಿನ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ 10 ಮತ್ತು ಸಂಜೆ 4.30ರಿಂದ ರಾತ್ರಿ 10 ಗಂಟೆಯವರೆಗೆ ಎಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಿದ್ದಾರೆ.</p>.<p>ನಗರದ 94 ಕಡೆ ‘ಸ್ಟಾಟಿಂಗ್ ಪಾಯಿಂಟ್’ಗಳನ್ನು ಗುರುತಿಸಿದ್ದು, ಇಲ್ಲಿ 160 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 40 ‘ಗರುಡ’ ವಾಹನಗಳಿಂದ ಪಹರೆ ನಡೆಸಲಿದ್ದು, ಇವುಗಳಲ್ಲಿ 6 ಮಹಿಳಾ ಸಿಬ್ಬಂದಿ ಇರುವ ‘ಗರುಡ’ ವಾಹನಗಳೇ ಇವೆ. ಜತೆಗೆ, 25 ‘ಚೀತಾ’ ವಾಹನಗಳಲ್ಲೂ ಪೊಲೀಸರು ಗಸ್ತು ನಡೆಸುತ್ತಿದ್ದಾರೆ.</p>.<p>ಸಂಚಾರ ಪೊಲೀಸರನ್ನು 30 ಸ್ಥಳಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ನಂಬರ್ ಪ್ಲೇಟ್ ಇಲ್ಲದ 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಮುತ್ತುರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬೆಳಿಗ್ಗೆ 6 ಗಂಟೆಯಿಂದಲೇ ಉದ್ಯಾನಗಳು, ವಾಯುವಿಹಾರ ಮಾಡುವಂತಹ ಜಾಗಗಳು, ಕ್ರೀಡಾಂಗಣಗಳು, ದೇವಸ್ಥಾನಗಳು, ಹಾಲಿನ ಅಂಗಡಿಗಳ ಬಳಿ ಪೊಲೀಸರು ಗಸ್ತು ನಡೆಸುತ್ತಿದ್ದಾರೆ.</p>.<p>ಮತ್ತೆ ಸಂಜೆ 4 ಗಂಟೆ ಕಾರ್ಯಾಚರಣೆ ಆರಂಭಿಸುವ ಪೊಲೀಸರು ರಾತ್ರಿ 10 ಗಂಟೆಯವರೆಗೂ ವಿಶೇಷ ನಿಗಾ ಇರಿಸುತ್ತಿದ್ದಾರೆ.</p>.<p>ಧ್ವನಿವರ್ಧಕಗಳ ಮೂಲಕ ಪ್ರಚಾರ:</p>.<p>ಧ್ವನಿವರ್ಧಕಗಳ ಮೂಲಕ ಸರಗಳ್ಳತನ ಕುರಿತು ಪೊಲೀಸರು ಮಾಹಿತಿ ನೀಡುವ ಕೆಲಸ ಆರಂಭಿಸಿದ್ದಾರೆ. ವಿಶೇಷವಾಗಿ ಮಹಿಳಾ ಗರುಡ ಪೊಲೀಸರು ಧ್ವನಿವರ್ಧಕದಲ್ಲಿ ಸರವನ್ನು ಜೋಪಾನವಾಗಿಟ್ಟುಕೊಳ್ಳುವ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಣ್ಣಿಗೆ ಕುಕ್ಕುವಂತಹ ಆಭರಣ ಧರಿಸಿ ಹೋಗುತ್ತಿರುವ ಮಹಿಳೆಯರನ್ನು ತಡೆದು ಅವರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.</p>.<p>ಮತ್ತೆರಡು ಸರಗಳ್ಳತನ</p>.<p>ನಗರದಲ್ಲಿ ಗುರುವಾರ ಕೇವಲ 5 ಸರಗಳ್ಳತನಗಳು ಮಾತ್ರ ನಡೆದಿಲ್ಲ, ಒಟ್ಟು 7 ಪ್ರಕರಣಗಳು ನಡೆದಿವೆ. ಸರ ಕಳೆದುಕೊಂಡ ಇನ್ನಿಬ್ಬರು ಮಹಿಳೆಯರು ತಡವಾಗಿ ದೂರು ನೀಡಿದ್ದಾರೆ.</p>.<p>ವಿದ್ಯಾರಣ್ಯಪುರಂನ ರಾಮಕೃಷ್ಣ ರಸ್ತೆಯ ಶಂಭುಲಿಂಗೇಶ್ವರ ಸ್ಟೋರ್ ಬಳಿ ಗೀತಾ ಎಂಬುವವರು ರಾತ್ರಿ 8.50ರಲ್ಲಿ ನಡೆದು ಬರುತ್ತಿದ್ದಾಗ ಎದುರಿನಿಂದ ಬೈಕ್ನಲ್ಲಿ ಬಂದ ಇಬ್ಬರಲ್ಲಿ ಒಬ್ಬಾತ 32 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.</p>.<p>ಇದೇ ಬಡಾವಣೆಯ ರಾಘವೇಂದ್ರ ಮಠದ ಹತ್ತಿರ ಆರ್.ನಾಗರತ್ನಮ್ಮ ಅವರು ರಾತ್ರಿ 8.30ರಲ್ಲಿ ನಡೆದು ಹೋಗುವಾಗ ಬೈಕ್ನಲ್ಲಿ ಬಂದ ಇಬ್ಬರು 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಗುರುವಾರ ಒಂದೇ ದಿನ ವಿದ್ಯಾರಣ್ಯಾಪುರಂ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 4 ಸರಗಳ್ಳತನಗಳು ನಡೆದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>