‘ವರ್ಧಂತಿ ಅಂಗವಾಗಿ ದೇಗುಲದಲ್ಲಿ ಬುಧವಾರ ನಸುಕಿನ 4.30ರಿಂದ ರುದ್ರಾಭಿಷೇಕ, ಪಂಚಾಮೃತ, ಅಭ್ಯಂಜನ ಸ್ನಾನ, ಅಲಂಕಾರ, ಅಷ್ಟೋತ್ತರ ಸಹಸ್ರನಾಮ, 9.15ಕ್ಕೆ ಮಹಾ ಮಂಗಳಾರತಿ, 10.30ಕ್ಕೆ ಚಿನ್ನದ ಪಲ್ಲಕ್ಕಿ ಉತ್ಸವ ನಡೆಯಿತು. ಸಾಯಂಕಾಲ 5.12ಕ್ಕೆ ಕೈತೋಳು ಉತ್ಸವ, ರಾತ್ರಿ 8.30ಕ್ಕೆ ದರ್ಬಾರ್ ಉತ್ಸವ ನಡೆಯಲಿದೆ’ ಎಂದು ದೇವಸ್ಥಾನದ ಮುಖ್ಯಅರ್ಚಕ ಶಶಿಶೇಖರ್ ದೀಕ್ಷಿತ್ ತಿಳಿಸಿದರು.