ಗುರುವಾರ ಇಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಕರಾವಳಿ ಮಾದರಿ ಎಂದರೆ ಹತ್ತಾರು ಕಲ್ಪನೆಗಳಿದ್ದು, ’ಬೆಂಕಿ ಹಾಕುವುದು’ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ, ಸಂಘಟನೆಯ ಆಧಾರದಲ್ಲಿ ಮತಗಟ್ಟೆಯಿಂದ ಗಟ್ಟಿ ಮಾಡಿ ಮತದಾರರ ಮನಮನದಲ್ಲಿ ಕಮಲ ಅರಳಿಸುವುದೇ ಕರಾವಳಿಯ ಕಲ್ಪನೆ. ಮೈಸೂರಿನಿಂದ ಈ ಯಾತ್ರೆ ಆರಂಭವಾಗಿದ್ದು, ದುಷ್ಟಶಕ್ತಿ ನಿವಾರಣೆ ಮಾಡಿ ಸದೃಢ ಭಾರತ ನಿರ್ಮಿಸುವ ಗುರಿಯನ್ನುಬಿಜೆಪಿ ಹೊಂದಿದೆ’ ಎಂದು ಹೇಳಿದರು.