ಇಷ್ಟು ಮಾಹಿತಿ ನೀಡಿದರೂ ಪಾಲಿಕೆ ಸದಸ್ಯರಲ್ಲಿ ಯೋಜನೆ ಕುರಿತು ಒಮ್ಮತ ಮೂಡಲಿಲ್ಲ. ಕಳೆದೆರಡು ಸಭೆಗಳಲ್ಲಿಯಂತೆ ಈ ಬಾರಿಯೂ ವಿಷಯವನ್ನು ಮುಂದಕ್ಕೆ ಹಾಕಲು ಮೇಯರ್ ತಸ್ನೀಂ ಯತ್ನಿಸಿದಾಗ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಮೇಯರ್ ವೇದಿಕೆಯ ಸಮೀಪಕ್ಕೆ ನುಗ್ಗಿದ ಮ.ವಿ.ರಾಮಪ್ರಸಾದ್ ಯೋಜನೆಗೆ ಒಪ್ಪಿಗೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಸುಬ್ಬಯ್ಯ, ಪ್ರೇಮಾ, ಅಯೂಬ್ಖಾನ್, ಎಸ್ಬಿಎಂ ಮಂಜು, ಬಿ.ವಿ.ಮಂಜುನಾಥ್ ಸೇರಿದಂತೆ ಹಲವು ಸದಸ್ಯರು ಒಪ್ಪಿಗೆ ನೀಡಲು ಒತ್ತಾಯಿಸಿದರು. ನಂತರ, ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಿ ಇತರೆ ಕಂಪನಿಗಳು ಬಾರದೇ ಹೋದರೆ ಸುಸ್ಥಿರ ಟ್ರಸ್ಟ್ಗೆ ನೀಡಬೇಕು ಎನ್ನುವ ಕೆ.ವಿ.ಶ್ರೀಧರ್ ಸೇರಿದಂತೆ ಇತರೆ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಮೇಯರ್ ತಾತ್ವಿಕ ಒಪ್ಪಿಗೆ ನೀಡಿ, ಸಾರ್ವಜನಿಕವಾಗಿ ಕಟ್ಟಡ ತ್ಯಾಜ್ಯ ನಿರ್ವಹಣೆ ಮಾಡಲು ಕಂಪನಿಗಳನ್ನು ಆಹ್ವಾನಿಸಲು ಸೂಚಿಸಿದರು.