<p><strong>ಮೈಸೂರು: </strong>ಅಕ್ಷಯ ಆಹಾರ ಫೌಂಡೇಷನ್ ವತಿಯಿಂದ ಇಲ್ಲಿನ ಕೆ.ಆರ್.ಆಸ್ಪತ್ರೆ ಮುಂಭಾಗ ಶನಿವಾರದಿಂದ ನಿತ್ಯ 2 ಸಾವಿರ ಮಂದಿಗೆ ಆಹಾರವನ್ನು ವಿತರಿಸಲಾಗುತ್ತಿದೆ.</p>.<p>ಫೌಂಡೇಷನ್ನಿನ ಮಹತ್ವಕಾಂಕ್ಷೆಯ ಕಾರ್ಯಕ್ರಮವಾದ ‘ಅಕ್ಷಯ ಆಹಾರ ಜೋಳಿಗೆ’ ಮೂಲಕ ಎಚ್.ಆರ್.ರಾಜೇಂದ್ರ, ಎಂ.ಕೆ.ಶ್ವೇತಾ ಸೇರಿದಂತೆ 9 ಮಂದಿ ಇಲ್ಲಿ ನಿತ್ಯ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಳ್ಳುವ ಸಂಬಂಧಿಕರಿಗೆ, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವವರಿಗೆ, ರಸ್ತೆಬದಿಯಲ್ಲಿ ವಾಸಿಸುತ್ತಿರುವವರಿಗೆ ವಿತರಿಸುತ್ತಿದ್ದಾರೆ.</p>.<p>ಇದರ ಜತೆಗೆ, ಕುವೆಂಪುನಗರದ ಸುಮಾಸೋಪಾನ ಉದ್ಯಾನ, ಸಿದ್ದಾರ್ಥನಗರದ ಮೋಕ್ಷ ಮಾರ್ಗದಲ್ಲಿಯೂ ನಿರಾಶ್ರಿತರಿಗೆ, ರಸ್ತೆ ಬದಿ ವಾಸಿಸುವವರಿಗೆ ಆಹಾರ ನೀಡುತ್ತಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಫೌಂಡೇಷನ್ನಿನ ಎಚ್.ಆರ್.ರಾಜೇಂದ್ರ, ‘ಕಳೆದ ವರ್ಷವೂ ಲಾಕ್ಡೌನ್ ಸಮಯದಲ್ಲಿ ಇದೇ ಬಗೆಯಲ್ಲಿ ಸೇವಾ ಕಾರ್ಯ ಮಾಡಲಾಗಿತ್ತು. ಈಗ ಇಂಡಿ ಫುಡ್ಸ್, ಪ್ರಕಾಶ್ ಜ್ಯುಯೆಲ್ಲರಿ ಸೇರಿದಂತೆ ಇತರ ಸಂಸ್ಥೆಗಳು ಜತೆಯಾಗಿವೆ. ಆಹಾರದ ಅಗತ್ಯವಿದ್ದವರು ಮೊ: 9148987375 ಸಂಪರ್ಕಿಸಬಹುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಅಕ್ಷಯ ಆಹಾರ ಫೌಂಡೇಷನ್ ವತಿಯಿಂದ ಇಲ್ಲಿನ ಕೆ.ಆರ್.ಆಸ್ಪತ್ರೆ ಮುಂಭಾಗ ಶನಿವಾರದಿಂದ ನಿತ್ಯ 2 ಸಾವಿರ ಮಂದಿಗೆ ಆಹಾರವನ್ನು ವಿತರಿಸಲಾಗುತ್ತಿದೆ.</p>.<p>ಫೌಂಡೇಷನ್ನಿನ ಮಹತ್ವಕಾಂಕ್ಷೆಯ ಕಾರ್ಯಕ್ರಮವಾದ ‘ಅಕ್ಷಯ ಆಹಾರ ಜೋಳಿಗೆ’ ಮೂಲಕ ಎಚ್.ಆರ್.ರಾಜೇಂದ್ರ, ಎಂ.ಕೆ.ಶ್ವೇತಾ ಸೇರಿದಂತೆ 9 ಮಂದಿ ಇಲ್ಲಿ ನಿತ್ಯ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಳ್ಳುವ ಸಂಬಂಧಿಕರಿಗೆ, ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವವರಿಗೆ, ರಸ್ತೆಬದಿಯಲ್ಲಿ ವಾಸಿಸುತ್ತಿರುವವರಿಗೆ ವಿತರಿಸುತ್ತಿದ್ದಾರೆ.</p>.<p>ಇದರ ಜತೆಗೆ, ಕುವೆಂಪುನಗರದ ಸುಮಾಸೋಪಾನ ಉದ್ಯಾನ, ಸಿದ್ದಾರ್ಥನಗರದ ಮೋಕ್ಷ ಮಾರ್ಗದಲ್ಲಿಯೂ ನಿರಾಶ್ರಿತರಿಗೆ, ರಸ್ತೆ ಬದಿ ವಾಸಿಸುವವರಿಗೆ ಆಹಾರ ನೀಡುತ್ತಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಫೌಂಡೇಷನ್ನಿನ ಎಚ್.ಆರ್.ರಾಜೇಂದ್ರ, ‘ಕಳೆದ ವರ್ಷವೂ ಲಾಕ್ಡೌನ್ ಸಮಯದಲ್ಲಿ ಇದೇ ಬಗೆಯಲ್ಲಿ ಸೇವಾ ಕಾರ್ಯ ಮಾಡಲಾಗಿತ್ತು. ಈಗ ಇಂಡಿ ಫುಡ್ಸ್, ಪ್ರಕಾಶ್ ಜ್ಯುಯೆಲ್ಲರಿ ಸೇರಿದಂತೆ ಇತರ ಸಂಸ್ಥೆಗಳು ಜತೆಯಾಗಿವೆ. ಆಹಾರದ ಅಗತ್ಯವಿದ್ದವರು ಮೊ: 9148987375 ಸಂಪರ್ಕಿಸಬಹುದು’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>