ಗ್ರಾಮಗಳು ಜಲಾವೃತಗೊಳ್ಳುವ ಭೀತಿ: ಜಲಾಶಯಗಳಿಂದ ಕಾಲುವೆ, ಕೆರೆ-ಕಟ್ಟೆಗಳಿಗೆ ನೀರು ಹರಿಸುವುದರಿಂದ, ಬೇಸಾಯದಲ್ಲಿ ತೊಡಗಲು ರೈತರು ಉತ್ಸುಕರಾಗಿದ್ದಾರೆ. ಭೂಮಿಯನ್ನು ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ತಲಕಾಡು ಹೋಬಳಿಯ ನದಿ ತೀರದ ಗ್ರಾಮಗಳಾದ ತಡಿಮಾಲಂಗಿ, ಕುಕ್ಕೂರು, ಮಡವಾಡಿ ಗ್ರಾಮಗಳು ಜಲಾವೃತಗೊಳ್ಳುವ ಭೀತಿಯಲ್ಲಿ ಜನರಿದ್ದಾರೆ. ಭತ್ತದ ಕಟಾವಿಗೆ ಮಳೆ ಅಡ್ಡಿಪಡಿಸುತ್ತಿದೆ.