ಹೊಸಕೋಟೆ, ತುಮ್ಮನೇರಳೆ, ಆಲತ್ತೂರು, ಸುತ್ತೂರು ನಂದಿಗುಂದಪುರ, ನಂದಿಗುಂದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದು ನಿಂತಿದೆ. ಕಟಾವು ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ. ಹೀಗಾಗಿ, ಯಂತ್ರಗಳನ್ನೇ ಅವಲಂಬಿಸಬೇಕಾದ ಅನಿವಾರ್ಯವಿದೆ. ಆದರೆ, ಸರಿಯಾದ ಸಮಯಕ್ಕೆ ಯಂತ್ರಗಳು ಬಾರದೆ ರೈತರು ಪರದಾಡುವಂತಾಗಿದೆ.