ಕೆರೆಯ ಮಣ್ಣನ್ನು ಇಟ್ಟಿಗೆ ಗೂಡಿಗೆ ಬಳಸಿಕೊಂಡಿದ್ದಾರೆ ಎಂಬ ದೂರನ್ನು ಗ್ರಾಮಸ್ಥರೊಬ್ಬರು ಹೇಳುತ್ತಿದ್ದಂತೆ, ‘ನೀವ್ ಲೀಡ್ರೇನಪ್ಪಾ’ ಎಂದು ದೇಶಪಾಂಡೆ ಪ್ರಶ್ನಿಸಿದರು. ‘ಕೆರೆಯ ಮಣ್ಣು ಫಲವತ್ತಾದ ಗೊಬ್ಬರವಿದ್ದಂತೆ. ರೈತರ ಹೊಲಕ್ಕೆ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಜರುಗಿಸಿ’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ಗೆ ಸೂಚಿಸಿದರು.