ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ಡಾ.ಎಸ್.ಟಿ.ರಾಮಚಂದ್ರ ಮಾತನಾಡಿ ‘ಬ್ಯಾಂಕಿಂಗ್ ವಲಯಗಳಿಗೆ ರಾಜ್ಯದ ಯುವಕರು ವಿಮುಖರಾಗಿದ್ದು, ಹೆಚ್ಚು ಜನರು ಈ ಕ್ಷೇತ್ರಕ್ಕೆ ಕೆಲಸಕ್ಕಾಗಿ ಬರುತ್ತಿಲ್ಲ. ಪರಿಣಾಮ ಈ ಕ್ಷೇತ್ರದಲ್ಲಿನ ಉದ್ಯೋಗವಕಾಶಗಳು ಉತ್ತರ ಭಾರತದವರ ಪಾಲಾಗುತ್ತಿದೆ. ಈ ಕ್ಷೇತ್ರಕ್ಕೆ ಬಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಉತ್ತಮ ಸಂಬಳ, ಉದ್ಯೋಗ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಇರುತ್ತದೆ. ಆದರೆ ಎಲ್ಲರೂ ಐಟಿ, ಬಿಟಿ ಎಂದು ಖಾಸಗಿ ಕಂಪನಿಗಳ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಆ ಉದ್ಯೋಗದಲ್ಲಿ ಭದ್ರತೆ ಇದೆಯೇ ಎಂಬುದನ್ನು ಅರಿಯಬೇಕು’ ಎಂದು ಹೇಳಿದರು.