<p><strong>ಮೈಸೂರು: ‘</strong>ಭಕ್ತಿಯೇ ಪ್ರಧಾನವಾದ ಶ್ರೀಕೃಷ್ಣ ಪಾರಿಜಾತವು ಕಲಾವಿದರ ಅರ್ಪಣಾ ಶಕ್ತಿಯಿಂದ ರೂಪುಗೊಂಡ ಬಯಲಾಟ’ ಎಂದು ಡಾ.ಶ್ರೀರಾಮ ಇಟ್ಟಣ್ಣವರ ಹೇಳಿದರು.</p>.<p>ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಬುಧವಾರ ಆಯೋಜಿಸಿದ್ದ ವೆಬಿನಾರ್ನಲ್ಲಿ ‘ಶ್ರೀಕೃಷ್ಣ ಪಾರಿಜಾತ: ಭಕ್ತಿಯ ಚಹರೆಗಳು’ ಕುರಿತು ಅವರು ಮಾತನಾಡಿದರು.</p>.<p>‘ಜೈನ, ಇಸ್ಲಾಂ ಸೇರಿದಂತೆ ವಿವಿಧ ಸಮುದಾಯ ಗಳಿಗೆ ಸೇರಿದ ನೂರಾರು ಕಲಾವಿ ದರು ಕೃಷ್ಣ ತತ್ವವನ್ನು ಪಾರಿಜಾತ ಬಯಲಾಟದ ಮೂಲಕ ಜನರಿಗೆ ತಲುಪಿಸಿದರು. ಕೃಷ್ಣ ಭಕ್ತಿಯೊಂದೇ ಅವರ ಉಸಿರಾಗಿತ್ತು’ ಎಂದರು.</p>.<p>‘ಮದುವೆ ನಂತರ ಪಾರಿಜಾತ ಬಯಲಾಟ ಏರ್ಪಡಿಸುವುದು ಉತ್ತರ ಕರ್ನಾಟಕದಲ್ಲಿ ವಾಡಿಕೆ. ಕೊಲ್ಹಾಪುರದ ರಾಮಣ್ಣ, ಹುಕ್ಕೇರಿ ಸಿದ್ದರಾಮಪ್ಪ, ಲಿಂಗವ್ವ ಮೊದಲಾದ ಕಲಾವಿದರ ಅರ್ಪಣಾ ಮನೋಭಾವದಿಂದ ಬಯಲಾಟ ಜನರ ಮನದಲ್ಲಿ ನೆಲೆಯೂರಿದೆ’ ಎಂದು ಹೇಳಿದರು.</p>.<p>‘ಸತ್ಯಭಾಮೆಯ ಮಾನವೀಯ ಗುಣಗಳಿಂದಾಗಿ ಪಾರಿಜಾತ ಜನಪ್ರಿಯತೆ ಪಡೆದಿದೆ. ಕೀರ್ತನೆ ಶೈಲಿಯಲ್ಲಿರುವ ನಾಟಕದಲ್ಲಿ ಭಕ್ತಿ– ಅಧ್ಯಾತ್ಮದ ವಿವೇಚನಾತ್ಮಕ ಹುಡುಕಾಟವಿದೆ. ಕಲಾವಿದರೇ ಅವಕಾಶ ಸಿಕ್ಕಾಗಲೆಲ್ಲ ಕೃಷ್ಣ ಭಕ್ತಿಯ ಸ್ವ–ಅನುಭವವನ್ನು ನಾಟಕದಲ್ಲಿ ಹಂಚಿಕೊಳ್ಳುತ್ತಾರೆ’ ಎಂದು ತಿಳಿಸಿದರು.</p>.<p>ಯೋಜನಾ ನಿರ್ದೇಶಕ ಪ್ರೊ.ಶಿವರಾಮ ಶೆಟ್ಟಿ, ಹಿರಿಯ ಫೆಲೋ ಡಾ.ಎಂ.ಕನ್ನಿಕಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಭಕ್ತಿಯೇ ಪ್ರಧಾನವಾದ ಶ್ರೀಕೃಷ್ಣ ಪಾರಿಜಾತವು ಕಲಾವಿದರ ಅರ್ಪಣಾ ಶಕ್ತಿಯಿಂದ ರೂಪುಗೊಂಡ ಬಯಲಾಟ’ ಎಂದು ಡಾ.ಶ್ರೀರಾಮ ಇಟ್ಟಣ್ಣವರ ಹೇಳಿದರು.</p>.<p>ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು ಬುಧವಾರ ಆಯೋಜಿಸಿದ್ದ ವೆಬಿನಾರ್ನಲ್ಲಿ ‘ಶ್ರೀಕೃಷ್ಣ ಪಾರಿಜಾತ: ಭಕ್ತಿಯ ಚಹರೆಗಳು’ ಕುರಿತು ಅವರು ಮಾತನಾಡಿದರು.</p>.<p>‘ಜೈನ, ಇಸ್ಲಾಂ ಸೇರಿದಂತೆ ವಿವಿಧ ಸಮುದಾಯ ಗಳಿಗೆ ಸೇರಿದ ನೂರಾರು ಕಲಾವಿ ದರು ಕೃಷ್ಣ ತತ್ವವನ್ನು ಪಾರಿಜಾತ ಬಯಲಾಟದ ಮೂಲಕ ಜನರಿಗೆ ತಲುಪಿಸಿದರು. ಕೃಷ್ಣ ಭಕ್ತಿಯೊಂದೇ ಅವರ ಉಸಿರಾಗಿತ್ತು’ ಎಂದರು.</p>.<p>‘ಮದುವೆ ನಂತರ ಪಾರಿಜಾತ ಬಯಲಾಟ ಏರ್ಪಡಿಸುವುದು ಉತ್ತರ ಕರ್ನಾಟಕದಲ್ಲಿ ವಾಡಿಕೆ. ಕೊಲ್ಹಾಪುರದ ರಾಮಣ್ಣ, ಹುಕ್ಕೇರಿ ಸಿದ್ದರಾಮಪ್ಪ, ಲಿಂಗವ್ವ ಮೊದಲಾದ ಕಲಾವಿದರ ಅರ್ಪಣಾ ಮನೋಭಾವದಿಂದ ಬಯಲಾಟ ಜನರ ಮನದಲ್ಲಿ ನೆಲೆಯೂರಿದೆ’ ಎಂದು ಹೇಳಿದರು.</p>.<p>‘ಸತ್ಯಭಾಮೆಯ ಮಾನವೀಯ ಗುಣಗಳಿಂದಾಗಿ ಪಾರಿಜಾತ ಜನಪ್ರಿಯತೆ ಪಡೆದಿದೆ. ಕೀರ್ತನೆ ಶೈಲಿಯಲ್ಲಿರುವ ನಾಟಕದಲ್ಲಿ ಭಕ್ತಿ– ಅಧ್ಯಾತ್ಮದ ವಿವೇಚನಾತ್ಮಕ ಹುಡುಕಾಟವಿದೆ. ಕಲಾವಿದರೇ ಅವಕಾಶ ಸಿಕ್ಕಾಗಲೆಲ್ಲ ಕೃಷ್ಣ ಭಕ್ತಿಯ ಸ್ವ–ಅನುಭವವನ್ನು ನಾಟಕದಲ್ಲಿ ಹಂಚಿಕೊಳ್ಳುತ್ತಾರೆ’ ಎಂದು ತಿಳಿಸಿದರು.</p>.<p>ಯೋಜನಾ ನಿರ್ದೇಶಕ ಪ್ರೊ.ಶಿವರಾಮ ಶೆಟ್ಟಿ, ಹಿರಿಯ ಫೆಲೋ ಡಾ.ಎಂ.ಕನ್ನಿಕಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>