ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾವ ಹಾಗೂ ಇಲ್ಲಿನ ಇಟ್ಟಿಗೆಗೂಡಿನ ನಿವಾಸಿ ತಿಮ್ಮಯ್ಯ (ಪಾಪಣ್ಣ) (83) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೈಸೂರಿನ ರಾಜ ಸೋಪ್ ನೆಟ್ ಕಾರ್ಖಾನೆ ಮಾಲೀಕರೂ ಆಗಿದ್ದ ಅವರಿಗೆ ಪತ್ನಿ ಲಕ್ಷ್ಮೀ, ಪುತ್ರ ಸತ್ಯನಾರಾಯಣ್, ಪುತ್ರಿಯರಾದ ಉಷಾ ಶಿವಕುಮಾರ್, ಅನಿತಾ, ಸುಮಾರಂಗನಾಥ್ ಇದ್ದಾರೆ. ಅಂತ್ಯಕ್ರಿಯೆ ಅ.27ರಂದು ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅವರ ತೋಟದಲ್ಲಿ ನಡೆಯಲಿದೆ.