ನಿಂಗರಾಜ ಮಲ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ದಲಿತರು, ಹಿಂದುಳಿದವರು, ನೊಂದವರು, ಶೋಷಿತರಿಗೆ ಹೋರಾಟವೇ ಪರ್ಯಾಯವಾಗಿದೆ. ಇನ್ಮುಂದಾದರೂ ದಲಿತ ಸಮೂಹ ರಾಜಕೀಯವಾಗಿ ಆಲೋಚಿಸಬೇಕಿದೆ. ತಳಹಂತದ ನೊಂದವರು, ಹಸಿದವರು, ಬೀದಿಗೆ ಬಿದ್ದವರ ಧ್ವನಿಯಾಗುವ ಅನಿವಾರ್ಯತೆ ದಲಿತ ಸಂಘರ್ಷ ಸಮಿತಿಗಿದೆ. ಸಾಲಿಗ್ರಾಮ ಘಟನೆ ಖಂಡನಾರ್ಹ’ ಎಂದು ಹೇಳಿದರು.