ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಗೌಡ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ಮೈಸೂರು ದಾಪುಗಾಲಿಟ್ಟಿದ್ದು, 2018ರಲ್ಲಿದ್ದ ಎಂಡಿಸಿಸಿ ಪರಿಸ್ಥಿತಿ ಈಗ ಇಲ್ಲ. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿಕೊಂಡಿದೆ. 60 ವರ್ಷಗಳಿಂದ ಎಂಡಿಸಿಸಿ ಕೇವಲ ₹337 ಕೋಟಿ ಠೇವಣಿ ಸಂಗ್ರಹಿಸಲು ಸಾಧ್ಯವಾಗಿತ್ತು. 2018ರ ಬಳಿಕ 4 ವರ್ಷಗಳಲ್ಲಿ ₹900 ಕೋಟಿ ಠೇವಣಿ ಸಂಗ್ರಹಿಸಿ, 45 ಸಾವಿರ ಜನರಿಗೆ ನೀಡಿದ್ದ ಸಾಲವನ್ನು 1 ಲಕ್ಷ ಕೃಷಿಕರಿಗೆ ವಿಸ್ತರಿಸಿ ₹1 ಸಾವಿರ ಕೋಟಿಯನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ್ದೇವೆ’ ಎಂದರು.