<p><strong>ಮೈಸೂರು: </strong>ನಗರದಲ್ಲಿ ಸೋಮವಾರ ಸಂಭವಿಸಿದ ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ 7 ಎಕರೆಯಷ್ಟು ಪ್ರದೇಶ ಉರಿದು ಭಸ್ಮವಾಗಿದೆ. ಎಲ್ಲೆಡೆ ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ಪಡೆ ಸಂಭವಿಸಬಹುದಾದ್ದ ದುರಂತವನ್ನು ತಪ್ಪಿಸಿದೆ.</p>.<p>ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಕಿಡಿಗೇಡಿಯೊಬ್ಬ ಎಸೆದ ಸಿಗರೇಟ್ನಿಂದ ಹೊತ್ತಿದ ಬೆಂಕಿ ಬರೋಬ್ಬರಿ 2 ಎಕರೆಯಷ್ಟು ಪ್ರದೇಶದ ಒಣಹುಲ್ಲನ್ನು ಆಪೋಶನ ತೆಗೆದುಕೊಂಡಿತು. ಒಣಹುಲ್ಲು ನೋಡ ನೋಡುತ್ತಿದ್ದಂತೆ ಧಗಧಗಿಸಿತು.</p>.<p>ಮಧ್ಯಾಹ್ನ 2.15ಕ್ಕೆ ಬಂದ ಕರೆಗೆ ತ್ವರಿತವಾಗಿ ಸ್ಪಂದಿಸಿದ ಬನ್ನಿಮಂಟಪದ ಅಗ್ನಿಶಾಮಕಪಡೆ 2.23ಕ್ಕೆ ಸ್ಥಳ ತಲುಪಿ, ಬೆಂಕಿ ನಂದಿಸಲು ತೊಡಗಿತು. 3 ವಾಹನಗಳಲ್ಲಿ ನೀರು ಹಾಕಿ ಕೆಲವರು ನಂದಿಸಿದರೆ, ಮತ್ತೆ ಕೆಲವರು ಹಸಿರುಸೊಪ್ಪು ಹಾಕಿ ಬೆಂಕಿ ಹರಡುವುದನ್ನು ತಪ್ಪಿಸಿದರು.</p>.<p>ಒಂದು ವೇಳೆ ಸಕಾಲಕ್ಕೆ ಅಗ್ನಿಶಾಮಕ ಪಡೆ ಬಾರದಿದ್ದಲ್ಲಿ ಬೆಂಕಿಯು ಅಕ್ಕಪಕ್ಕದ ಕಟ್ಟಡಗಳಿಗೆ ಹರಡುವ ಸಾಧ್ಯತೆ ಇತ್ತು. ಬೆಂಕಿಯಿಂದ ನೂರಾರು ಪಕ್ಷಿಗಳ ಗೂಡುಗಳು ಸುಟ್ಟು ಹೋಗಿವೆ. ದಿಕ್ಕು ಕಾಣದಂತಾದ ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಿದ್ದವು.</p>.<p>ಅಗ್ನಿಶಾಮಕ ಅಧಿಕಾರಿ ಭರತ್ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಶಿವಸ್ವಾಮಿ, ಸಿಬ್ಬಂದಿಯಾದ ಧನಂಜಯ, ಶಿವಲಿಂಗಯ್ಯ, ಮಹದೇವ, ರವಿ, ಮಂಜುನಾಥ್, ಸುರೇಶ ಪೂಜಾರಿ, ನತಾಫ, ಪ್ರಮೋದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<p><strong>ಹೆಬ್ಬಾಳದಲ್ಲಿ 2 ಕಡೆ ಬೆಂಕಿ</strong></p>.<p>ಹೆಬ್ಬಾಳದ ಡಿಆರ್ಡಿಒ ಆವರಣದಲ್ಲಿ ಒಣ ಹುಲ್ಲಿಗೆ ತಗುಲಿದ ಬೆಂಕಿಯು ನೋಡನೋಡುತ್ತಿದ್ದಂತೆ 5 ಎಕರೆಯಷ್ಟು ಪ್ರದೇಶವನ್ನು ಭಸ್ಮಗೊಳಿಸಿತು. ಇಲ್ಲಿಗೆ ಬಂದ ಹೆಬ್ಬಾಳ ಅಗ್ನಿಶಾಮಕ ಪಡೆ ಬೆಂಕಿ ಉಂಟಾಗಿದ್ದ ಸ್ಥಳ ತಲುಪಲು ಸಾಧ್ಯವಾಗದೇ ಪರದಾಡಿದರು. ದೊಡ್ಡದಾದ ಗೇಟ್ ಅನ್ನು ದಾಟಿ ಕೊನೆಗೂ ಬೆಂಕಿ ನಂದಿಸಿ, ಇತರೆಡೆ ಹರಡದಂತೆ ತಡೆದರು. </p>.<p>ಅಗ್ನಿಶಾಮಕ ಠಾಣೆಯ ಸಹಾಯಕ ಅಧಿಕಾರಿ ತಮ್ಮಯ್ಯ, ಸಿಬ್ಬಂದಿಯಾದ ರಮೇಶ್, ಪರಮೇಶ್, ನಾಗರಾಜ ಪಾಂಡುಶೆಟ್ಟಿ, ವಿನೋದ ಹುಲಗೋಳ ಕಾರ್ಯಾಚರಣೆ ತಂಡದಲ್ಲಿದ್ದರು.</p>.<p>ಹೆಬ್ಬಾಳದಲ್ಲಿ ಶಾಲಾ ವಾಹನವೊಂದಕ್ಕೆ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕಪಡೆ ನಂದಿಸಿತು. ಗೋಕುಲಂನ 3ನೇ ಹಂತದಲ್ಲೂ ಒಣಹುಲ್ಲಿಗೆ ಬೆಂಕಿ ತಗುಲಿತ್ತು. ಇಲ್ಲಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಗರದಲ್ಲಿ ಸೋಮವಾರ ಸಂಭವಿಸಿದ ಪ್ರತ್ಯೇಕ ಬೆಂಕಿ ಅವಘಡಗಳಲ್ಲಿ 7 ಎಕರೆಯಷ್ಟು ಪ್ರದೇಶ ಉರಿದು ಭಸ್ಮವಾಗಿದೆ. ಎಲ್ಲೆಡೆ ಸಕಾಲಕ್ಕೆ ಆಗಮಿಸಿದ ಅಗ್ನಿಶಾಮಕ ಪಡೆ ಸಂಭವಿಸಬಹುದಾದ್ದ ದುರಂತವನ್ನು ತಪ್ಪಿಸಿದೆ.</p>.<p>ಸರ್ಕಾರಿ ಅತಿಥಿಗೃಹದ ಆವರಣದಲ್ಲಿ ಕಿಡಿಗೇಡಿಯೊಬ್ಬ ಎಸೆದ ಸಿಗರೇಟ್ನಿಂದ ಹೊತ್ತಿದ ಬೆಂಕಿ ಬರೋಬ್ಬರಿ 2 ಎಕರೆಯಷ್ಟು ಪ್ರದೇಶದ ಒಣಹುಲ್ಲನ್ನು ಆಪೋಶನ ತೆಗೆದುಕೊಂಡಿತು. ಒಣಹುಲ್ಲು ನೋಡ ನೋಡುತ್ತಿದ್ದಂತೆ ಧಗಧಗಿಸಿತು.</p>.<p>ಮಧ್ಯಾಹ್ನ 2.15ಕ್ಕೆ ಬಂದ ಕರೆಗೆ ತ್ವರಿತವಾಗಿ ಸ್ಪಂದಿಸಿದ ಬನ್ನಿಮಂಟಪದ ಅಗ್ನಿಶಾಮಕಪಡೆ 2.23ಕ್ಕೆ ಸ್ಥಳ ತಲುಪಿ, ಬೆಂಕಿ ನಂದಿಸಲು ತೊಡಗಿತು. 3 ವಾಹನಗಳಲ್ಲಿ ನೀರು ಹಾಕಿ ಕೆಲವರು ನಂದಿಸಿದರೆ, ಮತ್ತೆ ಕೆಲವರು ಹಸಿರುಸೊಪ್ಪು ಹಾಕಿ ಬೆಂಕಿ ಹರಡುವುದನ್ನು ತಪ್ಪಿಸಿದರು.</p>.<p>ಒಂದು ವೇಳೆ ಸಕಾಲಕ್ಕೆ ಅಗ್ನಿಶಾಮಕ ಪಡೆ ಬಾರದಿದ್ದಲ್ಲಿ ಬೆಂಕಿಯು ಅಕ್ಕಪಕ್ಕದ ಕಟ್ಟಡಗಳಿಗೆ ಹರಡುವ ಸಾಧ್ಯತೆ ಇತ್ತು. ಬೆಂಕಿಯಿಂದ ನೂರಾರು ಪಕ್ಷಿಗಳ ಗೂಡುಗಳು ಸುಟ್ಟು ಹೋಗಿವೆ. ದಿಕ್ಕು ಕಾಣದಂತಾದ ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಿದ್ದವು.</p>.<p>ಅಗ್ನಿಶಾಮಕ ಅಧಿಕಾರಿ ಭರತ್ಕುಮಾರ್, ಅಗ್ನಿಶಾಮಕ ಠಾಣಾಧಿಕಾರಿ ಶಿವಸ್ವಾಮಿ, ಸಿಬ್ಬಂದಿಯಾದ ಧನಂಜಯ, ಶಿವಲಿಂಗಯ್ಯ, ಮಹದೇವ, ರವಿ, ಮಂಜುನಾಥ್, ಸುರೇಶ ಪೂಜಾರಿ, ನತಾಫ, ಪ್ರಮೋದ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.</p>.<p><strong>ಹೆಬ್ಬಾಳದಲ್ಲಿ 2 ಕಡೆ ಬೆಂಕಿ</strong></p>.<p>ಹೆಬ್ಬಾಳದ ಡಿಆರ್ಡಿಒ ಆವರಣದಲ್ಲಿ ಒಣ ಹುಲ್ಲಿಗೆ ತಗುಲಿದ ಬೆಂಕಿಯು ನೋಡನೋಡುತ್ತಿದ್ದಂತೆ 5 ಎಕರೆಯಷ್ಟು ಪ್ರದೇಶವನ್ನು ಭಸ್ಮಗೊಳಿಸಿತು. ಇಲ್ಲಿಗೆ ಬಂದ ಹೆಬ್ಬಾಳ ಅಗ್ನಿಶಾಮಕ ಪಡೆ ಬೆಂಕಿ ಉಂಟಾಗಿದ್ದ ಸ್ಥಳ ತಲುಪಲು ಸಾಧ್ಯವಾಗದೇ ಪರದಾಡಿದರು. ದೊಡ್ಡದಾದ ಗೇಟ್ ಅನ್ನು ದಾಟಿ ಕೊನೆಗೂ ಬೆಂಕಿ ನಂದಿಸಿ, ಇತರೆಡೆ ಹರಡದಂತೆ ತಡೆದರು. </p>.<p>ಅಗ್ನಿಶಾಮಕ ಠಾಣೆಯ ಸಹಾಯಕ ಅಧಿಕಾರಿ ತಮ್ಮಯ್ಯ, ಸಿಬ್ಬಂದಿಯಾದ ರಮೇಶ್, ಪರಮೇಶ್, ನಾಗರಾಜ ಪಾಂಡುಶೆಟ್ಟಿ, ವಿನೋದ ಹುಲಗೋಳ ಕಾರ್ಯಾಚರಣೆ ತಂಡದಲ್ಲಿದ್ದರು.</p>.<p>ಹೆಬ್ಬಾಳದಲ್ಲಿ ಶಾಲಾ ವಾಹನವೊಂದಕ್ಕೆ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕಪಡೆ ನಂದಿಸಿತು. ಗೋಕುಲಂನ 3ನೇ ಹಂತದಲ್ಲೂ ಒಣಹುಲ್ಲಿಗೆ ಬೆಂಕಿ ತಗುಲಿತ್ತು. ಇಲ್ಲಿ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>