<p><strong>ಮೈಸೂರು</strong>: ಮಹಾತ್ಮ ಗಾಂಧೀಜಿ ಅವರ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯಕ್ರಮಗಳು ಗಾಂಧಿ ಭವನದ ಮೂಲಕ ಆಗಬೇಕಿದೆ. ಒಂದು ಗ್ರಂಥಾಲಯ ಮತ್ತು ಅತಿಥಿ ಗೃಹ ಬೇಕಿದೆ. ಇದಕ್ಕೆ ಸರ್ಕಾರದ ನೆರವನ್ನು ಕೋರಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.</p>.<p>ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮದಿನದ ಅಂಗವಾಗಿ ಬುಧವಾರ ಗಾಂಧಿ ಭವನದಲ್ಲಿ ನಡೆದ ವಿಶ್ವ ಅಹಿಂಸಾ ದಿನದಲ್ಲಿ ಅವರು ಮಾತನಾಡಿದರು.</p>.<p>ಒಂದು ವೇಳೆ ಸರ್ಕಾರ ನೆರವು ನೀಡದಿದ್ದರೆ, ಮೈಸೂರು ವಿ.ವಿ ವತಿಯಿಂದಲೇ ಕಾಮಗಾರಿ ಕೈಗೊಳ್ಳಲಾಗುವುದು. ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು, ಸಂವಾದ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.</p>.<p>‘ದೇಶದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಇಲ್ಲದಂತಹ ಸಾಬರಮತಿ ಆಶ್ರಮದ ತದ್ರೂಪು ನಮ್ಮ ವಿವಿಯ ಗಾಂಧಿ ಭವನಲ್ಲಿರುವುದು ವಿಶೇಷ. ಇಲ್ಲಿ ಗಾಂಧಿ ವಿಚಾರಧಾರೆಗಳಿಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಕೆಲಸ ಆಗಬೇಕಿದೆ’ ಎಂದರು.</p>.<p>ನಾಡಿನ ಹಿರಿಯ ಗಾಂಧಿವಾದಿ ಚಾಮರಾಜನಗರದ ಸಿ.ಆರ್.ರಂಗಶೆಟ್ಟಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಂಗಪಟ್ಟಣದ ಡಾ.ಬಿ.ಸಂಜಯ್ ಕುಮಾರ್, ವಿವಿ ಕುಲಸಚಿವ ಆರ್.ಶಿವಪ್ಪ, ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ಖಜಾಂಚಿ ಎನ್.ಸಂತೋಷ್ಕುಮಾರ್, ಗಾಂಧಿಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.</p>.<p>ವಿ.ವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅವರು ನಾಡಿನ ಸಾಹಿತಿಗಳು ಕಂಡಂತೆ ಗಾಂಧೀಜಿ ಅವರ ವ್ಯಕ್ತಿತ್ವವನ್ನು ಕುರಿತು<br />ತಾವೇ ರಚಿಸಿರುವ ಕವನ ವಾಚಿಸಿದರು.</p>.<p>ಶ್ರೀರಂಗಪಟ್ಟಣದ ಡಾ.ಸುಜಯ್ಕುಮಾರ್, ಎನ್.ಸಂತೋಷ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳು ‘ಗಾಂಧಿ ಭಜನೆ’ಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಮಹಾತ್ಮ ಗಾಂಧೀಜಿ ಅವರ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಕಾರ್ಯಕ್ರಮಗಳು ಗಾಂಧಿ ಭವನದ ಮೂಲಕ ಆಗಬೇಕಿದೆ. ಒಂದು ಗ್ರಂಥಾಲಯ ಮತ್ತು ಅತಿಥಿ ಗೃಹ ಬೇಕಿದೆ. ಇದಕ್ಕೆ ಸರ್ಕಾರದ ನೆರವನ್ನು ಕೋರಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.</p>.<p>ಮಾನಸ ಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಜ್ಞಾನದೀಪ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮದಿನದ ಅಂಗವಾಗಿ ಬುಧವಾರ ಗಾಂಧಿ ಭವನದಲ್ಲಿ ನಡೆದ ವಿಶ್ವ ಅಹಿಂಸಾ ದಿನದಲ್ಲಿ ಅವರು ಮಾತನಾಡಿದರು.</p>.<p>ಒಂದು ವೇಳೆ ಸರ್ಕಾರ ನೆರವು ನೀಡದಿದ್ದರೆ, ಮೈಸೂರು ವಿ.ವಿ ವತಿಯಿಂದಲೇ ಕಾಮಗಾರಿ ಕೈಗೊಳ್ಳಲಾಗುವುದು. ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು, ಸಂವಾದ, ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.</p>.<p>‘ದೇಶದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಇಲ್ಲದಂತಹ ಸಾಬರಮತಿ ಆಶ್ರಮದ ತದ್ರೂಪು ನಮ್ಮ ವಿವಿಯ ಗಾಂಧಿ ಭವನಲ್ಲಿರುವುದು ವಿಶೇಷ. ಇಲ್ಲಿ ಗಾಂಧಿ ವಿಚಾರಧಾರೆಗಳಿಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಕೆಲಸ ಆಗಬೇಕಿದೆ’ ಎಂದರು.</p>.<p>ನಾಡಿನ ಹಿರಿಯ ಗಾಂಧಿವಾದಿ ಚಾಮರಾಜನಗರದ ಸಿ.ಆರ್.ರಂಗಶೆಟ್ಟಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಂಗಪಟ್ಟಣದ ಡಾ.ಬಿ.ಸಂಜಯ್ ಕುಮಾರ್, ವಿವಿ ಕುಲಸಚಿವ ಆರ್.ಶಿವಪ್ಪ, ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ಖಜಾಂಚಿ ಎನ್.ಸಂತೋಷ್ಕುಮಾರ್, ಗಾಂಧಿಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.</p>.<p>ವಿ.ವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಅವರು ನಾಡಿನ ಸಾಹಿತಿಗಳು ಕಂಡಂತೆ ಗಾಂಧೀಜಿ ಅವರ ವ್ಯಕ್ತಿತ್ವವನ್ನು ಕುರಿತು<br />ತಾವೇ ರಚಿಸಿರುವ ಕವನ ವಾಚಿಸಿದರು.</p>.<p>ಶ್ರೀರಂಗಪಟ್ಟಣದ ಡಾ.ಸುಜಯ್ಕುಮಾರ್, ಎನ್.ಸಂತೋಷ್ ಕುಮಾರ್ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮೈಸೂರು ವಿ.ವಿ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳು ‘ಗಾಂಧಿ ಭಜನೆ’ಗಳನ್ನು ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>