ನಾಡಿನ ಹಿರಿಯ ಗಾಂಧಿವಾದಿ ಚಾಮರಾಜನಗರದ ಸಿ.ಆರ್.ರಂಗಶೆಟ್ಟಿ ಅವರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಂಗಪಟ್ಟಣದ ಡಾ.ಬಿ.ಸಂಜಯ್ ಕುಮಾರ್, ವಿವಿ ಕುಲಸಚಿವ ಆರ್.ಶಿವಪ್ಪ, ಜ್ಞಾನ ದೀಪ ಶಿಕ್ಷಣ ಸಂಸ್ಥೆಯ ಖಜಾಂಚಿ ಎನ್.ಸಂತೋಷ್ಕುಮಾರ್, ಗಾಂಧಿಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.