‘ನಿಮ್ಮ ಕಸ ನಿಮಗೆ, ನಾಳೆಗಳು ನಮ್ಮದು’ ಎಂಬ ಧ್ಯೇಯವನ್ನಿಟ್ಟುಕೊಂಡು, ವಿವಿಧ ಕಂಪನಿಗಳ ಪ್ಲಾಸ್ಟಿಕ್ ಕವರುಗಳನ್ನು ಆಯಾ ಕಂಪನಿಗಳಿಗೆ ವಾಪಸು ಕಳಿಸುವ ಮೂಲಕ, ವಿನೂತನ ಮಾದರಿಯ ಅಭಿಯಾನ ಕೈಗೊಂಡ ವಿದ್ಯಾರ್ಥಿಗಳು, ಐದನೇ ಕಂತಿನ ಕಸವನ್ನು ಹೆಗ್ಗಡಹಳ್ಳಿಯ ಪೋಸ್ಟ್ ಮಾಸ್ಟರ್ ಸುರೇಶ್ ಮೂಲಕ ಕಂಪನಿಗಳಿಗೆ ರವಾನಿಸಿದರು.