ಮೈಸೂರು: ಕಾಡುಪಾಪಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಅರಣ್ಯ ಸಂಚಾರ ದಳದ ಅಧಿಕಾರಿಗಳು ಮೂವರನ್ನು ಬಂಧಿಸಿ, 2 ಕಾಡುಪಾಪಗಳನ್ನು ರಕ್ಷಿಸಿದ್ದಾರೆ.
ಕಿರಣ್, ಮನೋಹರ್ ಹಾಗೂ ಸಿದ್ದರಾಜು ಬಂಧಿತರು. ಇವರು ತಿ.ನರಸೀಪುರ ಸಮೀಪದ ಫಾರ್ಮ್ಹೌಸ್ ಒಂದರಲ್ಲಿ ಕಾಡುಪಾಪಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಖರೀದಿದಾರರಂತೆ ನಟಿಸಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.
ವಾಮಾಚಾರ ಮಾಡುವಾಗ ಕಾಡುಪಾಪಗಳನ್ನು ಬಲಿ ಕೊಡಲಾಗುತ್ತದೆ. ಹೀಗಾಗಿ, ಇವುಗಳಿಗೆ ಕಾಳಸಂತೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.
ಅರಣ್ಯ ಸಂಚಾರ ದಳದ ಡಿಸಿಎಫ್ ಪೂವಯ್ಯ, ಎಸಿಎಫ್ ಸುವರ್ಣಾ, ಸಿಬ್ಬಂದಿಯಾದ ಮೋಹನ್, ಸುಂದರ್, ಲಕ್ಷ್ಮೀಶ್, ಪ್ರಮೋದ, ಕೊಟ್ರೇಶನಾಯಕ, ಮಹಂತೇಶ್, ಸತೀಶ್, ಶರಣಪ್ಪ ಕಾರ್ಯಾಚರಣೆ ತಂಡದಲ್ಲಿದ್ದರು.