ಅಮ್ರಿನ್ ಸಾನಿಯಾ, ಶಾಹಿದಾ ಹಾಗೂ ಆಯಿಷಾಬಾಯಿ ಆರೋಪಿಗಳು. ಇವರು ಜ. 18ರಂದು ಕೆ.ಆರ್.ಆಸ್ಪತ್ರೆಯ ವೈದ್ಯರೊಬ್ಬರನ್ನು ಭೇಟಿ ಮಾಡಿ, ನಿಮ್ಮ ವಿರುದ್ಧ ಹಲವು ದೂರುಗಳು ಬಂದಿದ್ದು, ಇವುಗಳನ್ನು ಚಾನಲ್ವೊಂದರಲ್ಲಿ ಪ್ರಸಾರ ಮಾಡಲಾಗುವುದು. ಪ್ರಸಾರ ಮಾಡಬಾರದು ಎನ್ನುವುದಾದರೆ ₹ 5 ಲಕ್ಷ ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಸಂಜೆ ಹೊತ್ತಿಗೆ ₹ 1.75 ಲಕ್ಷ ಹಣವನ್ನು ಕುವೆಂಪುನಗರದ ಹೋಟೆಲ್ವೊಂದಕ್ಕೆ ತಂದುಕೊಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಸ್ಪಂದಿಸದೇ ಹೋದಾಗ ವೈದ್ಯರನ್ನು ಮಂಡಿಮೊಹಲ್ಲಾದಲ್ಲಿ ಸುಮಾರು 15ರಿಂದ 20 ಮಂದಿ ಹಣ ಕೊಡುವಂತೆ ಹೆದರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮಂಡಿ ಠಾಣೆಯಲ್ಲಿ ದಾಖಲಾಗಿದೆ.