3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಲ್ಲಂಗಡಿ ಉತ್ತಮವಾಗಿ ಬಳ್ಳಿ ಬಿಟ್ಟಿದ್ದು, ಹೂವು ಕಚ್ಚಿತ್ತು. ಈ ಮಧ್ಯೆ ಫಸಲಿಗೆ ಕಾಣಿಸಿಕೊಂಡ ಕೀಟಬಾಧೆ ನಿಯಂತ್ರಿಸಲು ಸ್ಥಳೀಯ ಅಗ್ರೋ ಔಷಧ ಅಂಗಡಿಯಲ್ಲಿ ಕ್ರಿಮಿನಾಶಕ ಖರೀದಿಸಿದ್ದರು. ಔಷಧ ಸಿಂಪಡಣೆ ಬಗ್ಗೆ ಅಂಗಡಿ ಮಾಲೀಕ ಮಾಹಿತಿ ನೀಡಿದ್ದರು. ಅವರು ಹೇಳಿದಂತೆ ಕಲ್ಲಂಗಡಿ ಬಳ್ಳಿಗೆ ಸಿಂಪಡಿಸಿದ್ದರು. ಆದರೆ, ಈಗ ಬಳ್ಳಿಗಳು ಬಾಡಲಾರಂಭಿಸಿದ್ದು, ಗಿಡಗಳು ಸಾಯುವ ಹಂತ ತಲುಪಿವೆ.