<p>ತಿ.ನರಸೀಪುರ: ಪಟ್ಟಣದ ರೇಷ್ಮೆ ಕೈಗಾರಿಕಾ ನಿಗಮ (ಕೆಎಸ್ಐಸಿ) ದಲ್ಲಿ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡರು ಗುರುವಾರ ಕೆಎಸ್ಐಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.</p>.<p>ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ‘ಮೀಸಲಾತಿ ಅನ್ವಯ ಆದ್ಯತೆ ನೀಡದೆ ರಾತ್ರೋರಾತ್ರಿ ಹೊರಗಿನವರನ್ನು ಪಟ್ಟಣದ ಕೆಎಸ್ಐಸಿ ಘಟಕದ ವಿವಿಧ ಹುದ್ದೆಗಳಿಗೆ ಏಜೆನ್ಸಿ ಮೂಲಕ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ’ ಎಂದು<br />ಆರೋಪಿಸಿದರು.</p>.<p>‘ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸ್ಥಳೀಯರಿಗೆ ವಂಚಿಸಿ ಹೊರಗಿನವರಿಗೆ ಉದ್ಯೋಗ ನೀಡಲಾಗುತ್ತಿದೆ. ಸ್ಥಳೀಯರು ಉದ್ಯೋಗ ಕೇಳಿದರೆ ಹುದ್ದೆ ಖಾಲಿ ಇಲ್ಲ ಎಂಬ ಸಬೂಬು ಹೇಳಿ, ರಾತ್ರೋರಾತ್ರಿ ನೌಕರರನ್ನು ನೇಮಕ ಮಾಡುವುದರ ಹಿಂದಿನ ಉದ್ದೇಶ ಏನು?, ನೇಮಕಾತಿಯಲ್ಲಿ ಭ್ರಷ್ಟಾಚಾರದ ಶಂಕೆ ಇದೆ’ ಎಂದು ದೂರಿದರು.</p>.<p>‘ಈ ಸಂಬಂಧ ಉನ್ನತಮಟ್ಟದ ತನಿಖೆ ನಡೆಸಿ ಅಕ್ರಮ ನೇಮಕ ರದ್ದುಪಡಿಸಿ, ಪಾರದರ್ಶಕ ನೇಮಕಾತಿಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.</p>.<p>ಬಳಿಕ ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಅವರನ್ನು ಭೇಟಿ ಮಾಡಿದ ಮುಖಂಡರು ಮನವಿ ಪತ್ರ ನೀಡಿ, ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸುವಂತೆ<br />ಕೋರಿದರು.</p>.<p>ಪ್ರತಿಭಟನೆಯಲ್ಲಿ ಬನ್ನಳ್ಳಿ ಹುಂಡಿ ಉಮೇಶ್, ಶಿವು, ಕಿರಗಸೂರು ರಜನಿ, ಆಲಗೂಡು<br />ನಾಗರಾಜು, ಬೈರಾಪುರ ರಾಜೇಂದ್ರ, ಮದನ್ ಮತ್ತಿತರು<br />ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಿ.ನರಸೀಪುರ: ಪಟ್ಟಣದ ರೇಷ್ಮೆ ಕೈಗಾರಿಕಾ ನಿಗಮ (ಕೆಎಸ್ಐಸಿ) ದಲ್ಲಿ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ (ದಸಂಸ) ಮುಖಂಡರು ಗುರುವಾರ ಕೆಎಸ್ಐಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.</p>.<p>ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ‘ಮೀಸಲಾತಿ ಅನ್ವಯ ಆದ್ಯತೆ ನೀಡದೆ ರಾತ್ರೋರಾತ್ರಿ ಹೊರಗಿನವರನ್ನು ಪಟ್ಟಣದ ಕೆಎಸ್ಐಸಿ ಘಟಕದ ವಿವಿಧ ಹುದ್ದೆಗಳಿಗೆ ಏಜೆನ್ಸಿ ಮೂಲಕ ಅಕ್ರಮ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ’ ಎಂದು<br />ಆರೋಪಿಸಿದರು.</p>.<p>‘ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಸ್ಥಳೀಯರಿಗೆ ವಂಚಿಸಿ ಹೊರಗಿನವರಿಗೆ ಉದ್ಯೋಗ ನೀಡಲಾಗುತ್ತಿದೆ. ಸ್ಥಳೀಯರು ಉದ್ಯೋಗ ಕೇಳಿದರೆ ಹುದ್ದೆ ಖಾಲಿ ಇಲ್ಲ ಎಂಬ ಸಬೂಬು ಹೇಳಿ, ರಾತ್ರೋರಾತ್ರಿ ನೌಕರರನ್ನು ನೇಮಕ ಮಾಡುವುದರ ಹಿಂದಿನ ಉದ್ದೇಶ ಏನು?, ನೇಮಕಾತಿಯಲ್ಲಿ ಭ್ರಷ್ಟಾಚಾರದ ಶಂಕೆ ಇದೆ’ ಎಂದು ದೂರಿದರು.</p>.<p>‘ಈ ಸಂಬಂಧ ಉನ್ನತಮಟ್ಟದ ತನಿಖೆ ನಡೆಸಿ ಅಕ್ರಮ ನೇಮಕ ರದ್ದುಪಡಿಸಿ, ಪಾರದರ್ಶಕ ನೇಮಕಾತಿಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.</p>.<p>ಬಳಿಕ ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಅವರನ್ನು ಭೇಟಿ ಮಾಡಿದ ಮುಖಂಡರು ಮನವಿ ಪತ್ರ ನೀಡಿ, ಅಕ್ರಮ ನೇಮಕಾತಿ ಬಗ್ಗೆ ತನಿಖೆ ನಡೆಸುವಂತೆ<br />ಕೋರಿದರು.</p>.<p>ಪ್ರತಿಭಟನೆಯಲ್ಲಿ ಬನ್ನಳ್ಳಿ ಹುಂಡಿ ಉಮೇಶ್, ಶಿವು, ಕಿರಗಸೂರು ರಜನಿ, ಆಲಗೂಡು<br />ನಾಗರಾಜು, ಬೈರಾಪುರ ರಾಜೇಂದ್ರ, ಮದನ್ ಮತ್ತಿತರು<br />ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>