ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತೆ ಮೇಲೆ ಹಲ್ಲೆ

Last Updated 7 ಫೆಬ್ರುವರಿ 2020, 10:02 IST
ಅಕ್ಷರ ಗಾತ್ರ

ಹುಣಸೂರು: ಸುದ್ದಿವಾಹಿನಿಯೊಂದರ ವರದಿಗಾರ್ತಿ ಶ್ರುತಿ ಹಾಗೂ ಕ್ಯಾಮೆರಾಮೆನ್ ರಾಮಕೃಷ್ಣ ಎಂಬುವರನ್ನು ಗುರುವಾರ ರಾತ್ರಿ 8 ಜನರ ತಂಡವೊಂದು ಥಳಿಸಿ ಕ್ಯಾಮೆರಾ ಒಡೆದು ಹಾಕಿದೆ.

‘ಇವರು ರೆಹಮತ್ ಮೊಹಲ್ಲಾದಲ್ಲಿ ಹುಣಸೂರು ನಗರಸಭೆ ಚುನಾವಣೆ ಸಂಬಂಧ ಸಮೀಕ್ಷೆ ನಡೆಸಲು ಮತದಾರರನ್ನು ಮಾತನಾಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಗರಸಭೆ ಮಾಜಿ ಸದಸ್ಯ ಮುಜೀಬ್ ಮತ್ತು ಮಕ್ಕಳಾದ ಬಷೀರ್ ಆಹಮ್ಮದ್, ಮತ್ತು ಹಸೀಬ್ ಆಹಮ್ಮದ್ ಸೇರಿದಂತೆ 8 ಜನರ ತಂಡ ಅಡ್ಡಿಪಡಿಸಿ, ಹಲ್ಲೆ ನಡೆಸಿದೆ. ಜತೆಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಇವರನ್ನು ಕೂಡಲೇ ಬಂಧಿಸಲಾಗಿದೆ’ ಎಂದು ಸಬ್‌ಇನ್‌ಸ್ಪೆಕ್ಟರ್ ಮಹೇಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT