ಸಾಹಿತಿಗಳು ರಚಿಸಿದ ಗೀತೆಗಳ ಗಾಯನ ನಡೆಯಿತು. ಗಾಯಕರಾದ ಲೋಕೇಶ್, ಸಿದ್ದರಾಜು, ಭವತಾರಿಣಿ, ಲಿಂಗರಾಜು, ಸಿಂಚನಾ ಅವರ ತಂಡ ‘ನಾವು ಭಾರತೀಯರು’, ‘ಹಚ್ಚೇವು ಕನ್ನಡದ ದೀಪ’, ‘ಇಳಿದು ಬಾ ತಾಯಿ’, ‘ಹುಟ್ಟಿದರೆ ಕನ್ನಡ ನಾಡಲ್ಲಿ’, ‘ಯೆಂಡ ಯೆಡ್ತಿ ಕನ್ನಡ್ ಪದಗೊಳ್’, ‘ಹೇಳ್ಕೊಳ್ಳಕ್ ಒಂದ್ ಊರು‘, ‘ಈ ಕನ್ನಡ ಮಣ್ಣನು ಮರಿಬೇಡ’ ಗೀತೆಗಳನ್ನು ಪ್ರಸ್ತುತಪಡಿಸಿತು. ಪಕ್ಕವಾದ್ಯದಲ್ಲಿ ಪುರುಷೋತ್ತಮ್ (ಕೀಬೋರ್ಡ್), ರಘು (ತಬಲ), ಗುರುದತ್ (ರಿದಂ) ಸಾಥ್ ನೀಡಿದರು. ಶ್ರೀವತ್ಸ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮಳೆ ಬಂದಿದ್ದರಿಂದ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು.