ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ

Last Updated 22 ಅಕ್ಟೋಬರ್ 2021, 3:59 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ಸಿಎಆರ್‌ನ 3ನೇ ತಂಡದ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಶುಕ್ರವಾರ ನಡೆಯಿತು.

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ.ಹರಿಶೇಖರನ್, ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್ ಕುಮಾರ್, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಚೇತನ್, ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಭಾಗಿಯಾಗಿದ್ದರು.

ಒಟ್ಟು 168 ಮಂದಿ ನಿರ್ಗಮನ ಪಥ ಸಂಚಲನದಲ್ಲಿ ಭಾಗಿಯಾದರು.

ಪ್ರಶಸ್ತಿ ಪಡೆದವರು
ಒಳಾಂಗಣ ವಿಭಾಗದಲ್ಲಿ ರಮ್ಯಾ (ಪ್ರಥಮ), ಸುನೀತಾ ಹೊಸಮನಿ (ದ್ವಿತೀಯ), ಎಚ್.ಇ.ರೇಣುಕಾ (ತೃತೀಯ)
ಹೊರಾಂಗಣ ವಿಭಾಗದಲ್ಲಿ ತಾತ್ವಿಕ ಪಾಟೀಲ (ಪ್ರಥಮ), ನಳಿನಿಕುಮಾರಿ ಕುಲಕರ್ಣಿ (ದ್ವಿತೀಯ), ದೀಕ್ಷಿತಾ ದಾವಣಗೆರೆ, ಶೋಭಾ ರಾಯಚೂರು (ತೃತೀಯ) ಪ್ರಶಸ್ತಿಗಳನ್ನು ಪಡೆದರು.

ಸರ್ವೋತ್ತಮ ಪ್ರಶಸ್ತಿಯನ್ನು ತಾತ್ವಿಕ ಪಾಟೀಲ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT