<p><strong>ಮೈಸೂರು: </strong>ಅಲ್ಲಿ ಕನ್ನಡವನ್ನೇ ಉಸಿರಾಡುವ ಮಕ್ಕಳಿದ್ದರು. ಅವರನ್ನು ಕನ್ನಡ ಶಾಲೆಗೆ ಕಳಿಸಿದ ಪೋಷಕರಿದ್ದರು. ಕನ್ನಡಾಭಿಮಾನ ಮೂಡಿಸುವ ಶಿಕ್ಷಕರಿದ್ದರು. ಈ ತ್ರಿವಳಿ ಸಂಗಮದಲ್ಲಿ ಕನ್ನಡ ಗೀತೆಗಳ ಗಾಯನದ ಮೂಲಕ ರಾಜ್ಯೋತ್ಸವ ಸಂಪನ್ನವಾಯಿತು.</p>.<p>ನಗರ ಹೊರವಲಯದ ಲಿಂಗಾಂಬುಧಿ ಪಾಳ್ಯದಲ್ಲಿರುವ ಅರಿವು ಕನ್ನಡ ಶಾಲೆಯಲ್ಲಿ ಸೋಮವಾರ ಹೀಗೆ ಕನ್ನಡದ ಸಂಭ್ರಮ ಮನೆ ಮಾಡಿತ್ತು.ಐದು ಆರನೆ ತರಗತಿಯ ಮಕ್ಕಳು, 'ಮರವಾಗಲೆ ಓ ಜೀವವೆ ಮರವಾಗು,<br />ಭರವಸೆಯಲಿ ನೆರವಾಗು' ಹಾಡಿ ಆರಂಭದಲ್ಲೇ ಸಂಭ್ರಮವನ್ನು ಕಳೆಗಟ್ಟಿಸಿದರು. 'ಗೊರು ಗೊರುಕ ಗೊರುಕನದೊಡ್ಡ ಸಂಪಿಗೆ' ಹಾಡು ಲವಲವಿಕೆಯನ್ನು ಹೆಚ್ಚಿಸಿತು.</p>.<p>ಏಳು ಎಂಟನೆ ತರಗತಿ ಮಕ್ಕಳು ಕನ್ನಡಾಭಿಮಾನ ಕುರಿತ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸಿದರು.<br />ಹತ್ತನೇ ತರಗತಿ ಮಕ್ಕಳು, 'ಉಳ್ಳವರು ಶಿವಾಲಯವ ಮಾಡುವರು' ವಚನ, 'ಜೋಗದ ಸಿರಿ ಬೆಳಕಿನಲ್ಲಿ' ಭಾವಗೀತೆ ಹಾಡಿದರು. ನಂತರ, ಪೋಷಕರಾದ ಪ್ರಸಾದ, ಬರ್ಟಿ ಒಲಿವರಾ, ಡಾ.ಮನೋಹರ, ಕಾಜು ಸಾಹೇಬ ಗೀಗಿ ಪದ ಹಾಡಿ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿದರು.</p>.<p>'ಗೋಪಿ ಕೇಳು ನಿನ್ನ ಮಗ ಜಾರ, ಇವ ಚೋರ, ಸುಕುಮಾರ', 'ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿ ಯ ಧಾತು' ಗೀತೆಗಳನ್ನು ಹಾಡಿಶಿಕ್ಷಕರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.</p>.<p>ಮೈಸೂರು ಅರಗು ಮತ್ತು ಬಣ್ಣ ಕಾರ್ಖಾನೆಯ ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಶಾಲೆಯಲ್ಲಿ ನಿರ್ಮಿಸಿದ ಗ್ರಂಥಾಲಯ ಕಟ್ಟಡವನ್ನು ಸಂಸ್ಥೆಯ ಅಧ್ಯಕ್ಷ ಎನ್.ವಿ.ಫಣೀಶ ಉದ್ಘಾಟಿಸಿದರು. ಅವರಿಗೆ ಶಾಲೆಯು ಕೊಡುಗೆಯಾಗಿ ನೀಡಿದ 'ಬಾಲವನದಲ್ಲಿ ಭಾರ್ಗವ' ಕೃತಿಯ ಕೆಲವು ಸಾಲುಗಳನ್ನು 8ನೇ</p>.<p>ತರಗತಿಯ ಎಂ.ಜಿ.ಶ್ರೀವಿದ್ಯಾ ಓದುವ ಮೂಲಕ ರಾಜ್ಯೋತ್ಸವವನ್ನು ಉದ್ಘಾಟಿಸಿದ್ದು ವಿಶೇಷ.<br />ಶಾಲೆಯ ಕಾರ್ಯದರ್ಶಿ ಜನಾರ್ದನ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ, ಪ್ರಧಾನ ವ್ಯವಸ್ಥಾಪಕ ಸಿ.ಹರಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಅಲ್ಲಿ ಕನ್ನಡವನ್ನೇ ಉಸಿರಾಡುವ ಮಕ್ಕಳಿದ್ದರು. ಅವರನ್ನು ಕನ್ನಡ ಶಾಲೆಗೆ ಕಳಿಸಿದ ಪೋಷಕರಿದ್ದರು. ಕನ್ನಡಾಭಿಮಾನ ಮೂಡಿಸುವ ಶಿಕ್ಷಕರಿದ್ದರು. ಈ ತ್ರಿವಳಿ ಸಂಗಮದಲ್ಲಿ ಕನ್ನಡ ಗೀತೆಗಳ ಗಾಯನದ ಮೂಲಕ ರಾಜ್ಯೋತ್ಸವ ಸಂಪನ್ನವಾಯಿತು.</p>.<p>ನಗರ ಹೊರವಲಯದ ಲಿಂಗಾಂಬುಧಿ ಪಾಳ್ಯದಲ್ಲಿರುವ ಅರಿವು ಕನ್ನಡ ಶಾಲೆಯಲ್ಲಿ ಸೋಮವಾರ ಹೀಗೆ ಕನ್ನಡದ ಸಂಭ್ರಮ ಮನೆ ಮಾಡಿತ್ತು.ಐದು ಆರನೆ ತರಗತಿಯ ಮಕ್ಕಳು, 'ಮರವಾಗಲೆ ಓ ಜೀವವೆ ಮರವಾಗು,<br />ಭರವಸೆಯಲಿ ನೆರವಾಗು' ಹಾಡಿ ಆರಂಭದಲ್ಲೇ ಸಂಭ್ರಮವನ್ನು ಕಳೆಗಟ್ಟಿಸಿದರು. 'ಗೊರು ಗೊರುಕ ಗೊರುಕನದೊಡ್ಡ ಸಂಪಿಗೆ' ಹಾಡು ಲವಲವಿಕೆಯನ್ನು ಹೆಚ್ಚಿಸಿತು.</p>.<p>ಏಳು ಎಂಟನೆ ತರಗತಿ ಮಕ್ಕಳು ಕನ್ನಡಾಭಿಮಾನ ಕುರಿತ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸಿದರು.<br />ಹತ್ತನೇ ತರಗತಿ ಮಕ್ಕಳು, 'ಉಳ್ಳವರು ಶಿವಾಲಯವ ಮಾಡುವರು' ವಚನ, 'ಜೋಗದ ಸಿರಿ ಬೆಳಕಿನಲ್ಲಿ' ಭಾವಗೀತೆ ಹಾಡಿದರು. ನಂತರ, ಪೋಷಕರಾದ ಪ್ರಸಾದ, ಬರ್ಟಿ ಒಲಿವರಾ, ಡಾ.ಮನೋಹರ, ಕಾಜು ಸಾಹೇಬ ಗೀಗಿ ಪದ ಹಾಡಿ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿದರು.</p>.<p>'ಗೋಪಿ ಕೇಳು ನಿನ್ನ ಮಗ ಜಾರ, ಇವ ಚೋರ, ಸುಕುಮಾರ', 'ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿ ಯ ಧಾತು' ಗೀತೆಗಳನ್ನು ಹಾಡಿಶಿಕ್ಷಕರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.</p>.<p>ಮೈಸೂರು ಅರಗು ಮತ್ತು ಬಣ್ಣ ಕಾರ್ಖಾನೆಯ ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಶಾಲೆಯಲ್ಲಿ ನಿರ್ಮಿಸಿದ ಗ್ರಂಥಾಲಯ ಕಟ್ಟಡವನ್ನು ಸಂಸ್ಥೆಯ ಅಧ್ಯಕ್ಷ ಎನ್.ವಿ.ಫಣೀಶ ಉದ್ಘಾಟಿಸಿದರು. ಅವರಿಗೆ ಶಾಲೆಯು ಕೊಡುಗೆಯಾಗಿ ನೀಡಿದ 'ಬಾಲವನದಲ್ಲಿ ಭಾರ್ಗವ' ಕೃತಿಯ ಕೆಲವು ಸಾಲುಗಳನ್ನು 8ನೇ</p>.<p>ತರಗತಿಯ ಎಂ.ಜಿ.ಶ್ರೀವಿದ್ಯಾ ಓದುವ ಮೂಲಕ ರಾಜ್ಯೋತ್ಸವವನ್ನು ಉದ್ಘಾಟಿಸಿದ್ದು ವಿಶೇಷ.<br />ಶಾಲೆಯ ಕಾರ್ಯದರ್ಶಿ ಜನಾರ್ದನ, ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ, ಪ್ರಧಾನ ವ್ಯವಸ್ಥಾಪಕ ಸಿ.ಹರಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>