ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ತಂದಿದ್ದ ಕೇರಳ ಲಾರಿ ವಶಕ್ಕೆ

Last Updated 19 ಜುಲೈ 2019, 5:59 IST
ಅಕ್ಷರ ಗಾತ್ರ

ಮೈಸೂರು: ಕಸವನ್ನು ತೆಗೆದುಕೊಂಡು ಬಂದಿದ್ದ ಕೇರಳದ ಲಾರಿಯೊಂದನ್ನು ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಪಾಲಿಕೆ ಅಧಿಕಾರಿಗಳ ತಂಡವು ಗುರುವಾರ ರಾತ್ರಿ ಶಾಂತಿನಗರದ ಬಳಿ ವಶಕ್ಕೆ ತೆಗೆದುಕೊಂಡು ಚಾಲಕ ಜಾಫರ್‌ ಎಂಬಾತನನ್ನು ವಿಚಾರಣೆ ನಡೆಸಿದೆ.

ಪಾದರಕ್ಷೆ ಕಾರ್ಖಾನೆಯೊಂದಕ್ಕೆ ಈ ಕಸವನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಚಾಲಕ ತಿಳಿಸಿದ್ದಾನೆ. ಆದರೆ, ಇಲ್ಲಿನ ರಯನ್‌ ಟ್ರೇಡರ್ಸ್‌ ಮಾಲೀಕ ಹಾಕಿಬ್ ಅವರ ಜಿಎಸ್‌ಟಿ ಸಂಖ್ಯೆಯನ್ನು ಅಕ್ರಮವಾಗಿ ಈ ವ್ಯವಹಾರಕ್ಕೆ ಕೇರಳದ ರಾಜಲಕ್ಷ್ಮಿ ಟ್ರೇಡರ್ಸ್ ಬಳಕೆ ಮಾಡಿತ್ತು ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದೆ. ಹಾಗಾಗಿ, 2 ಪ್ರತ್ಯೇಕ ದೂರು ದಾಖಲಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT