ಪಾದರಕ್ಷೆ ಕಾರ್ಖಾನೆಯೊಂದಕ್ಕೆ ಈ ಕಸವನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಚಾಲಕ ತಿಳಿಸಿದ್ದಾನೆ. ಆದರೆ, ಇಲ್ಲಿನ ರಯನ್ ಟ್ರೇಡರ್ಸ್ ಮಾಲೀಕ ಹಾಕಿಬ್ ಅವರ ಜಿಎಸ್ಟಿ ಸಂಖ್ಯೆಯನ್ನು ಅಕ್ರಮವಾಗಿ ಈ ವ್ಯವಹಾರಕ್ಕೆ ಕೇರಳದ ರಾಜಲಕ್ಷ್ಮಿ ಟ್ರೇಡರ್ಸ್ ಬಳಕೆ ಮಾಡಿತ್ತು ಎಂಬುದು ವಿಚಾರಣೆ ವೇಳೆ ಪತ್ತೆಯಾಗಿದೆ. ಹಾಗಾಗಿ, 2 ಪ್ರತ್ಯೇಕ ದೂರು ದಾಖಲಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.