<p><strong>ಹಂಪಾಪುರ</strong>: ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಮ್ಮ ದೇವಾಲಯವನ್ನು ತಾಲ್ಲೂಕು ಆಡಳಿತವು ಬುಧವಾರ ನೆಲಸಮಗೊಳಿಸಿದೆ.</p>.<p>ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತಾಲ್ಲೂಕು ದಂಡಾಧಿಕಾರಿಗಳ ನೇತೃತ್ವದ ತಂಡ ಬುಧವಾರ ಬೆಳಿಗ್ಗೆ 4 ಗಂಟೆಗೆ ರಾಜ್ಯ ಹೆದ್ದಾರಿ 57ರಲ್ಲಿರುವ ದೇವಾಲಯವನ್ನು ಜೆಸಿಬಿ ಯಂತ್ರದ ಮೂಲಕ ಕೆಡವಲು ಮುಂದಾಯಿತು. ಸ್ಥಳಕ್ಕೆ ಬಂದ ಗ್ರಾಮಸ್ಥರು ತಡೆಯಲು ಮುಂದಾದರು. ಪೊಲೀಸರ ರಕ್ಷಣೆಯಲ್ಲಿ ನೆಲಸಮಗೊಳಿಸಲಾಯಿತು. ಗ್ರಾಮದ ಮಹಿಳೆಯರು ಕಣ್ಣೀರು ಹಾಕಿದರು. ದೇವಾಲಯದಲ್ಲಿ ಇದ್ದ ಅಮ್ಮನವರ ವಿಗ್ರಹವನ್ನು ಗ್ರಾಮಸ್ಥರಿಗೆ ಒಪ್ಪಿಸಲಾಯಿತು.</p>.<p>‘ಸುಪ್ರೀಂಕೋರ್ಟ್ ಆದೇಶ ನೀಡಿದ್ದರೆ ಹಗಲಿನ ವೇಳೆ ನೆಲಸಮ ಗೊಳಿಸಬಹುದಿತ್ತು. ಗ್ರಾಮಸ್ಥರಿಗೆ ಯಾವುದೇ ನೋಟಿಸ್ ನೀಡದೆ ಕಳ್ಳರಂತೆ ರಾತ್ರಿ ದೇವಾಲಯವನ್ನು ಏಕೆ ಕೆಡವಬೇಕಿತ್ತು’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.</p>.<p>‘ಇದು ಚೋಳರ ಕಾಲದ ದೇವಸ್ಥಾನ. ಕಳೆದ 23 ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲಾ ಸೇರಿ ₹60 ಲಕ್ಷ ವೆಚ್ಚದಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ಪುರಾತನ ದೇವಾಲಯಗಳನ್ನು ನೆಲಸಮಗೊಳಿಸಬಾರದು ಎಂಬ ನಿಯಮ ಇದ್ದರೂ, ಅಧಿಕಾರಿಗಳು ಕೆಡವಿದ್ದಾರೆ’ ಎಂದು ಗ್ರಾಮದ ಮುಖಂಡ ನರಸಿಂಹೇಗೌಡ ದೂರಿದರು.</p>.<p class="Briefhead">ಎರಡು ದಿನ ಶೋಕಾಚರಣೆ</p>.<p>ದೇವಾಲಯವನ್ನು ಕೆಡವಿರುವುದ ರಿಂದ ಗ್ರಾಮದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮದ ಕೆ.ರಾಜು ತಿಳಿಸಿದರು.</p>.<p>‘ದಾನಿಯೊಬ್ಬರು 5 ಗುಂಟೆ ಜಮೀನು ನೀಡಲಿದ್ದು, ಅಲ್ಲಿ ಮತ್ತೆ ದೇವಾಲಯ ನಿರ್ಮಿಸುತ್ತೇವೆ’ ಎಂದು ಗ್ರಾಮದ ರಾಜಣ್ಣ, ಸಿದ್ದೇಗೌಡ, ಬೇಗೂರೇಗೌಡ ತಿಳಿಸಿದರು.</p>.<p>***</p>.<p>ಇದು ಚೋಳರ ಕಾಲದ ದೇವಸ್ಥಾನವಲ್ಲ. ಕೋರ್ಟ್ ಆದೇಶದಂತೆ ತಾಲ್ಲೂಕಿನಲ್ಲಿ 2 ದೇವಸ್ಥಾನಗಳನ್ನು ಕೆಡವಲಾಗಿದೆ</p>.<p>–ಮೋಹನಕುಮಾರಿ, ತಹಶೀಲ್ದಾರ್, ನಂಜನಗೂಡು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಪಾಪುರ</strong>: ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಉಚ್ಚಗಣಿ ಗ್ರಾಮದ ಆದಿಶಕ್ತಿ ಮಹದೇವಮ್ಮ ದೇವಾಲಯವನ್ನು ತಾಲ್ಲೂಕು ಆಡಳಿತವು ಬುಧವಾರ ನೆಲಸಮಗೊಳಿಸಿದೆ.</p>.<p>ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತಾಲ್ಲೂಕು ದಂಡಾಧಿಕಾರಿಗಳ ನೇತೃತ್ವದ ತಂಡ ಬುಧವಾರ ಬೆಳಿಗ್ಗೆ 4 ಗಂಟೆಗೆ ರಾಜ್ಯ ಹೆದ್ದಾರಿ 57ರಲ್ಲಿರುವ ದೇವಾಲಯವನ್ನು ಜೆಸಿಬಿ ಯಂತ್ರದ ಮೂಲಕ ಕೆಡವಲು ಮುಂದಾಯಿತು. ಸ್ಥಳಕ್ಕೆ ಬಂದ ಗ್ರಾಮಸ್ಥರು ತಡೆಯಲು ಮುಂದಾದರು. ಪೊಲೀಸರ ರಕ್ಷಣೆಯಲ್ಲಿ ನೆಲಸಮಗೊಳಿಸಲಾಯಿತು. ಗ್ರಾಮದ ಮಹಿಳೆಯರು ಕಣ್ಣೀರು ಹಾಕಿದರು. ದೇವಾಲಯದಲ್ಲಿ ಇದ್ದ ಅಮ್ಮನವರ ವಿಗ್ರಹವನ್ನು ಗ್ರಾಮಸ್ಥರಿಗೆ ಒಪ್ಪಿಸಲಾಯಿತು.</p>.<p>‘ಸುಪ್ರೀಂಕೋರ್ಟ್ ಆದೇಶ ನೀಡಿದ್ದರೆ ಹಗಲಿನ ವೇಳೆ ನೆಲಸಮ ಗೊಳಿಸಬಹುದಿತ್ತು. ಗ್ರಾಮಸ್ಥರಿಗೆ ಯಾವುದೇ ನೋಟಿಸ್ ನೀಡದೆ ಕಳ್ಳರಂತೆ ರಾತ್ರಿ ದೇವಾಲಯವನ್ನು ಏಕೆ ಕೆಡವಬೇಕಿತ್ತು’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.</p>.<p>‘ಇದು ಚೋಳರ ಕಾಲದ ದೇವಸ್ಥಾನ. ಕಳೆದ 23 ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲಾ ಸೇರಿ ₹60 ಲಕ್ಷ ವೆಚ್ಚದಲ್ಲಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿದ್ದರು. ಪುರಾತನ ದೇವಾಲಯಗಳನ್ನು ನೆಲಸಮಗೊಳಿಸಬಾರದು ಎಂಬ ನಿಯಮ ಇದ್ದರೂ, ಅಧಿಕಾರಿಗಳು ಕೆಡವಿದ್ದಾರೆ’ ಎಂದು ಗ್ರಾಮದ ಮುಖಂಡ ನರಸಿಂಹೇಗೌಡ ದೂರಿದರು.</p>.<p class="Briefhead">ಎರಡು ದಿನ ಶೋಕಾಚರಣೆ</p>.<p>ದೇವಾಲಯವನ್ನು ಕೆಡವಿರುವುದ ರಿಂದ ಗ್ರಾಮದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮದ ಕೆ.ರಾಜು ತಿಳಿಸಿದರು.</p>.<p>‘ದಾನಿಯೊಬ್ಬರು 5 ಗುಂಟೆ ಜಮೀನು ನೀಡಲಿದ್ದು, ಅಲ್ಲಿ ಮತ್ತೆ ದೇವಾಲಯ ನಿರ್ಮಿಸುತ್ತೇವೆ’ ಎಂದು ಗ್ರಾಮದ ರಾಜಣ್ಣ, ಸಿದ್ದೇಗೌಡ, ಬೇಗೂರೇಗೌಡ ತಿಳಿಸಿದರು.</p>.<p>***</p>.<p>ಇದು ಚೋಳರ ಕಾಲದ ದೇವಸ್ಥಾನವಲ್ಲ. ಕೋರ್ಟ್ ಆದೇಶದಂತೆ ತಾಲ್ಲೂಕಿನಲ್ಲಿ 2 ದೇವಸ್ಥಾನಗಳನ್ನು ಕೆಡವಲಾಗಿದೆ</p>.<p>–ಮೋಹನಕುಮಾರಿ, ತಹಶೀಲ್ದಾರ್, ನಂಜನಗೂಡು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>