ಮೈಸೂರು: ಎಚ್ .ಡಿ .ಕೋಟೆ ತಾಲ್ಲೂಕಿನ ಅಣ್ಣೂರು ಗ್ರಾಮದಲ್ಲಿ ಮಹದೇವೇಗೌಡ (50) ಅವರ ಮೇಲೆ ಮರ ಬಿದ್ದು ಮೃತಪಟ್ಟಿದ್ದಾರೆ.
ಮಳೆಯಿಂದಾಗಿ ಇವರು ಮರದ ಕೆಳಗೆ ನಿಂತಿದ್ದರು. ಹನುಮಂತಶೆಟ್ಟಿ ಹಾಗೂ ನಂಜುಂಡಸ್ವಾಮಿ ಎಂಬುವವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಬಿನಿಯಿಂದ 40 ಸಾವಿರ ಕ್ಯುಸೆಕ್ ನೀರು ಹೊರಕ್ಕೆ:ಇಲ್ಲಿನ ಕಬಿನಿ ಜಲಾಶಯದಿಂದ ಬುಧವಾರ 40 ಸಾವಿರ ಕ್ಯುಸೆಕ್ ನಷ್ಟು ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದ ಹಂಪಾಪುರ ಭಾಗದಲ್ಲಿ ಪ್ರವಾಹ ಭೀತಿ ಸೃಷ್ಟಿಯಾಗಿದೆ.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದು ಜೊತೆಗೆ ರಭಸದಿಂದ ಗಾಳಿ ಬೀಸುತ್ತಿದೆ. ತಾಲ್ಲೂಕಿನ ಆವರ್ತಿ ಬಳಿ ಗಾಳಿಗೆ ಮುಸುಕಿನ ಜೋಳದ ಬೆಳೆ ಸಂಪೂರ್ಣ ನೆಲ ಕಚ್ಚಿದೆ.