ಇಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಮೇಯರ್–ಉಪ ಮೇಯರ್ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ದೇಶನದಂತೆ ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಲಾಗಿತ್ತು. ನನ್ನ ಕ್ಷೇತ್ರದವರೇ ಆದ ನಿರ್ಮಲಾ ಅವರನ್ನು ಅಪಹರಿಸಿ ಉಪ ಮೇಯರ್ ಅಭ್ಯರ್ಥಿ ಮಾಡಿದರು. ಆಗ ನಮ್ಮ ಪಕ್ಷದ ಪಾಲಿಕೆ ಸದಸ್ಯರೆಲ್ಲರೂ ಒಗ್ಗೂಡಿ ಬಿಜೆಪಿಯ ಮೇಯರ್ ಅಭ್ಯರ್ಥಿಗೆ ಮತ ಹಾಕುವ ತೀರ್ಮಾನ ಕೈಗೊಂಡೆವು’ ಎಂದು ಹೇಳಿದರು.