ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, 'ನನ್ನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಎಂದು ಗೊತ್ತಾಯಿತು. ಬಂಧಿಸಲಿ ಎಂದು ಠಾಣೆಗೆ ಬಂದೆ. ಕಾನೂನಾತ್ಮಕವಾಗಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ ಎಂದರು. ಹಿಂದೆ ಮಚ್ಚು ಹಿಡಿದು ಬೆದರಿಸುವ ರೌಡಿಗಳು ಇದ್ದರು.
ಇಂದು ಪೆನ್ನು ಹಿಡಿದು ಬೆದರಿಸುವ ರೌಡಿಗಳಿದ್ದಾರೆ. ಆ ಆರ್ಟಿಐ ಕಾರ್ಯಕರ್ತನ ಹಿನ್ನೆಲೆ ಏನು? ಅವರ ಆದಾಯದ ಮೂಲ ಏನು? ಕಳೆದ ಎರಡು ತಿಂಗಳಿಂದ ನಡೆದಿರುವ ಮೊಬೈಲ್ ಫೋನ್ ಸಂಭಾಷಣೆ ಕುರಿತ ವಿವರ ತೆಗೆಸಿದರೆ ಬಂಡವಾಳ ಬಯಲಾಗುತ್ತದೆ ಎಂದು ಹೇಳಿದರು.