<p><strong>ಮೈಸೂರು:</strong> ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಹೆಚ್ಚುವರಿ ಪರಿಹಾರದ ಬಾಕಿ ನೀಡದ ಕಾರಣ ಸಿಜೆಎಂ ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಡಿ.ಬಿ.ನಟೇಶ್ ಅವರ ಕಾರು ಜಪ್ತಿ ಮಾಡಲಾಗಿದೆ.</p>.<p>ಈ ಸಂಬಂಧ ಅರ್ಜಿದಾರರ ಪರ ವಕೀಲ ಸುರೇಶ್, ನ್ಯಾಯಾಲಯದ ಅಮೀನರು ಮುಡಾ ಆವರಣದಲ್ಲಿ ಎರಡು ಕಾರುಗಳನ್ನು ಗುರುವಾರ ಜಪ್ತಿ ಮಾಡಿದ್ದಾರೆ. ಅಲ್ಲದೇ, ಕಾರಿನ ಮೇಲೆ ನೋಟಿಸ್ ಅಂಟಿಸಿದ್ದಾರೆ.</p>.<p>ತಾಲ್ಲೂಕಿನ ಯಾಂದಳ್ಳಿಯ ಗ್ರಾಮದ ಸರ್ವೆ ಸಂಖ್ಯೆ 109/1ರಲ್ಲಿ ಚಿನ್ನಸ್ವಾಮಿ ಎಂಬ ರೈತನಿಗೆ ಸೇರಿದ 1 ಎಕರೆ 26 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣ ಉದ್ದೇಶಕ್ಕಾಗಿ ಮುಡಾ 1997 ಭೂಸ್ವಾಧೀನಪಡಿಸಿಕೊಂಡಿತ್ತು. ಹೆಚ್ಚುವರಿ ಪರಿಹಾರ ಕೋರಿ 2010ರಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>‘ನ್ಯಾಯಾಲಯದ ಆದೇಶದ ಪ್ರಕಾರ ಚಿನ್ನಸ್ವಾಮಿ ಅವರಿಗೆ ಪ್ರಾಧಿಕಾರವು ಹೆಚ್ಚುವರಿ ಪರಿಹಾರವಾಗಿ ಇನ್ನೂ ₹ 35.25 ಲಕ್ಷ ಬಾಕಿ ನೀಡಬೇಕಿದೆ. ಇದುವರೆಗೆ ಈ ಹಣ ಪಾವತಿಸಿಲ್ಲ. ಹೀಗಾಗಿ, ವಸೂಲಿಗಾಗಿ ಜಾರಿ ಪ್ರಕರಣದ ಅರ್ಜಿ ಹಾಕಲಾಗಿತ್ತು. ಚರಾಸ್ತಿಗೆ ಜಪ್ತಿಗೆ ಆದೇಶವಾಗಿದ್ದು, ವಾರದ ಹಿಂದೆಯೇ ನೋಟಿಸ್ ಕೂಡ ನೀಡಲಾಗಿದೆ. ಈಗ ಎರಡು ವಾಹನ ಜಪ್ತಿ ಮಾಡಿದ್ದೇವೆ. ಆದರೆ, ಆಯುಕ್ತರು ಕೀ ನೀಡುತ್ತಿಲ್ಲ’ ಎಂದು ವಕೀಲ ಸುರೇಶ್ ತಿಳಿಸಿದರು.</p>.<p>ಕಾರು ಜಪ್ತಿ ಮಾಡಿದ ಕಾರಣ ಮುಡಾ ಆಯುಕ್ತರು ಬೇರೆ ಕಾರಿನಲ್ಲಿ ತೆರಳಿದರು.</p>.<p class="Briefhead"><strong>ಮರುಪರಿಶೀಲನಾ ಅರ್ಜಿ: ನಟೇಶ್</strong><br />‘ನ್ಯಾಯಬದ್ಧವಾಗಿ ನೀಡಬೇಕಿದ್ದ ಹೆಚ್ಚುವರಿ ಪರಿಹಾರದ ಮೊತ್ತವನ್ನು ಪಾವತಿಸಲಾಗಿದೆ. ಹೀಗಾಗಿ, ಜಪ್ತಿ ಆದೇಶವನ್ನು ಪ್ರಶ್ನಿಸಿ ನ್ಯಾಯಾಲ ಯದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್ ಪ್ರತಿಕ್ರಿಯಿಸಿದರು.</p>.<p>‘ಭೂಸ್ವಾಧೀನಪಡಿಸಿಕೊಳ್ಳುವ ಪೂರ್ವದಲ್ಲಿ ಸರ್ವೆ ಸಂಖ್ಯೆ 109/1 ಪ್ರಕರಣದಲ್ಲಿ ₹ 8.96 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಬಳಿಕದ ವರ್ಷಗಳಲ್ಲಿ ನ್ಯಾಯಾಲಯಕ್ಕೆ ಹೋಗಿದ್ದರಿಂದ ಹೆಚ್ಚುವರಿ ಪರಿಹಾರ ನೀಡಬೇಕೆಂದು ಆದೇಶವಾಯಿತು. ಭೂಸ್ವಾಧೀನ ಪ್ರಕ್ರಿಯೆ ಆದ ದಿನದ ಲೆಕ್ಕಾಚಾರದ ಮೇಲೆ ₹ 89.79 ಲಕ್ಷವನ್ನು 2018ರಲ್ಲೇ ಪಾವತಿಸಿದ್ದೇವೆ. ಉಳಿದ ₹ 1.41 ಲಕ್ಷ ಬಾಕಿ ಇದೆ. ಆದರೆ, ಅವರು ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಪರಿಹಾರ ನೀಡ ಬೇಕೆಂದು ಕೇಳುತ್ತಿದ್ದಾರೆ. ಇದು ಶಾಸನಬದ್ಧವಾಗಿಲ್ಲ. ಈ ರೀತಿ ಮಾಡಿದರೆ ಮುಡಾಗೆ ಹೊರೆಯಾಗುತ್ತದೆ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಹೆಚ್ಚುವರಿ ಪರಿಹಾರದ ಬಾಕಿ ನೀಡದ ಕಾರಣ ಸಿಜೆಎಂ ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಡಿ.ಬಿ.ನಟೇಶ್ ಅವರ ಕಾರು ಜಪ್ತಿ ಮಾಡಲಾಗಿದೆ.</p>.<p>ಈ ಸಂಬಂಧ ಅರ್ಜಿದಾರರ ಪರ ವಕೀಲ ಸುರೇಶ್, ನ್ಯಾಯಾಲಯದ ಅಮೀನರು ಮುಡಾ ಆವರಣದಲ್ಲಿ ಎರಡು ಕಾರುಗಳನ್ನು ಗುರುವಾರ ಜಪ್ತಿ ಮಾಡಿದ್ದಾರೆ. ಅಲ್ಲದೇ, ಕಾರಿನ ಮೇಲೆ ನೋಟಿಸ್ ಅಂಟಿಸಿದ್ದಾರೆ.</p>.<p>ತಾಲ್ಲೂಕಿನ ಯಾಂದಳ್ಳಿಯ ಗ್ರಾಮದ ಸರ್ವೆ ಸಂಖ್ಯೆ 109/1ರಲ್ಲಿ ಚಿನ್ನಸ್ವಾಮಿ ಎಂಬ ರೈತನಿಗೆ ಸೇರಿದ 1 ಎಕರೆ 26 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣ ಉದ್ದೇಶಕ್ಕಾಗಿ ಮುಡಾ 1997 ಭೂಸ್ವಾಧೀನಪಡಿಸಿಕೊಂಡಿತ್ತು. ಹೆಚ್ಚುವರಿ ಪರಿಹಾರ ಕೋರಿ 2010ರಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>‘ನ್ಯಾಯಾಲಯದ ಆದೇಶದ ಪ್ರಕಾರ ಚಿನ್ನಸ್ವಾಮಿ ಅವರಿಗೆ ಪ್ರಾಧಿಕಾರವು ಹೆಚ್ಚುವರಿ ಪರಿಹಾರವಾಗಿ ಇನ್ನೂ ₹ 35.25 ಲಕ್ಷ ಬಾಕಿ ನೀಡಬೇಕಿದೆ. ಇದುವರೆಗೆ ಈ ಹಣ ಪಾವತಿಸಿಲ್ಲ. ಹೀಗಾಗಿ, ವಸೂಲಿಗಾಗಿ ಜಾರಿ ಪ್ರಕರಣದ ಅರ್ಜಿ ಹಾಕಲಾಗಿತ್ತು. ಚರಾಸ್ತಿಗೆ ಜಪ್ತಿಗೆ ಆದೇಶವಾಗಿದ್ದು, ವಾರದ ಹಿಂದೆಯೇ ನೋಟಿಸ್ ಕೂಡ ನೀಡಲಾಗಿದೆ. ಈಗ ಎರಡು ವಾಹನ ಜಪ್ತಿ ಮಾಡಿದ್ದೇವೆ. ಆದರೆ, ಆಯುಕ್ತರು ಕೀ ನೀಡುತ್ತಿಲ್ಲ’ ಎಂದು ವಕೀಲ ಸುರೇಶ್ ತಿಳಿಸಿದರು.</p>.<p>ಕಾರು ಜಪ್ತಿ ಮಾಡಿದ ಕಾರಣ ಮುಡಾ ಆಯುಕ್ತರು ಬೇರೆ ಕಾರಿನಲ್ಲಿ ತೆರಳಿದರು.</p>.<p class="Briefhead"><strong>ಮರುಪರಿಶೀಲನಾ ಅರ್ಜಿ: ನಟೇಶ್</strong><br />‘ನ್ಯಾಯಬದ್ಧವಾಗಿ ನೀಡಬೇಕಿದ್ದ ಹೆಚ್ಚುವರಿ ಪರಿಹಾರದ ಮೊತ್ತವನ್ನು ಪಾವತಿಸಲಾಗಿದೆ. ಹೀಗಾಗಿ, ಜಪ್ತಿ ಆದೇಶವನ್ನು ಪ್ರಶ್ನಿಸಿ ನ್ಯಾಯಾಲ ಯದಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಮುಡಾ ಆಯುಕ್ತ ಡಿ.ಬಿ.ನಟೇಶ್ ಪ್ರತಿಕ್ರಿಯಿಸಿದರು.</p>.<p>‘ಭೂಸ್ವಾಧೀನಪಡಿಸಿಕೊಳ್ಳುವ ಪೂರ್ವದಲ್ಲಿ ಸರ್ವೆ ಸಂಖ್ಯೆ 109/1 ಪ್ರಕರಣದಲ್ಲಿ ₹ 8.96 ಲಕ್ಷ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಬಳಿಕದ ವರ್ಷಗಳಲ್ಲಿ ನ್ಯಾಯಾಲಯಕ್ಕೆ ಹೋಗಿದ್ದರಿಂದ ಹೆಚ್ಚುವರಿ ಪರಿಹಾರ ನೀಡಬೇಕೆಂದು ಆದೇಶವಾಯಿತು. ಭೂಸ್ವಾಧೀನ ಪ್ರಕ್ರಿಯೆ ಆದ ದಿನದ ಲೆಕ್ಕಾಚಾರದ ಮೇಲೆ ₹ 89.79 ಲಕ್ಷವನ್ನು 2018ರಲ್ಲೇ ಪಾವತಿಸಿದ್ದೇವೆ. ಉಳಿದ ₹ 1.41 ಲಕ್ಷ ಬಾಕಿ ಇದೆ. ಆದರೆ, ಅವರು ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ದಿನದಿಂದಲೇ ಪರಿಹಾರ ನೀಡ ಬೇಕೆಂದು ಕೇಳುತ್ತಿದ್ದಾರೆ. ಇದು ಶಾಸನಬದ್ಧವಾಗಿಲ್ಲ. ಈ ರೀತಿ ಮಾಡಿದರೆ ಮುಡಾಗೆ ಹೊರೆಯಾಗುತ್ತದೆ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುತ್ತೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>