ಮೈಸೂರು: ಇಲ್ಲಿನ ಯುವರಾಜ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿಗಳು ತರಗತಿಗಳನ್ನು ಆರಂಭಿಸಲು ಒತ್ತಾಯಿಸಿ ಕ್ರಾಫರ್ಡ್ ಭವನದ ಮುಂಭಾಗ ಬುಧವಾರ ಧರಣಿ ನಡೆಸಿದರು.
ಜೈವಿಕ ತಂತ್ರಜ್ಞಾನ, ಸೂಕ್ಷ್ಮ ಜೀವಶಾಸ್ತ್ರ, ಎಂಬಿಎ ವಿಷಯಗಳಿಗೆ ಪಾಠ ಮಾಡಲು ಉಪನ್ಯಾಸಕರೇಇಲ್ಲ. ಇದ್ದಅತಿಥಿಉಪನ್ಯಾಸಕರನ್ನು ತೆಗೆದು ಹಾಕಲಾಗಿದೆ. ಫೆಬ್ರುವರಿ ಹೊತ್ತಿಗೆ ಪರೀಕ್ಷೆಗಳು ಎದುರಾಗಲಿವೆ. ಹೀಗಿದ್ದರೂ ಮೈಸೂರು ವಿಶ್ವವಿದ್ಯಾನಿಲಯ ಸುಮ್ಮನಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಎಲ್ಲ ವಿಷಯಕ್ಕೂ ನಿಗದಿತ ಸಂಖ್ಯೆಯಷ್ಟು ಉಪನ್ಯಾಸಕರನ್ನು ನೇಮಕ ಮಾಡಬೇಕು. ತರಗತಿಗಳು ನಿತ್ಯ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಗಳವಾರವೂ ವಿದ್ಯಾರ್ಥಿಗಳು ಯುವರಾಜ ಕಾಲೇಜಿನ ಮುಂದೆ ಧರಣಿ ನಡೆಸಿದ್ದರು.