<p><strong>ಮೈಸೂರು</strong>: ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ‘ನಮ್ಮ ಭೈರಪ್ಪನವರು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.</p>.<p>ದೇಶ–ವಿದೇಶದಲ್ಲಿರುವ ಓದುಗರು, ಒಡನಾಡಿಗಳು ತಮ್ಮ ಮೇಲೆ ಭೈರಪ್ಪನವರ ಸಾಹಿತ್ಯ ಬೀರಿದ ಪ್ರಭಾವಗಳ ಕುರಿತು ಬರೆದಿರುವ ಆತ್ಮೀಯ ಲೇಖನಗಳ ಗುಚ್ಚವೇ ಈ ಪುಸ್ತಕ.</p>.<p>ಭೈರಪ್ಪ ನಿವಾಸದಲ್ಲೇ ಪುಸ್ತಕ ಬಿಡುಗಡೆ ಸಮಾರಂಭ ಸರಳವಾಗಿ ನಡೆಯಿತು. ವಿದ್ವಾಂಸರಾದ ಡಾ.ಪ್ರಧಾನ ಗುರುದತ್, ಸಂಪಾದಕಿ ಎಂ.ಎಸ್.ವಿಜಯಾಹರನ್, ಲೇಖಕ ಸಂಸ್ಕೃತಿ ಸುಬ್ರಹ್ಮಣ್ಯ, ಪ್ರಕಾಶಕ ಶ್ರೀನಿಧಿ ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.</p>.<p>ಪುಸ್ತಕದ ಮೊದಲ ಪ್ರತಿ ಸ್ವೀಕರಿಸಿದ ಬಳಿಕ ಭೈರಪ್ಪನವರು ಮಾತನಾಡಿ, ‘ಕಲೆಯಲ್ಲಿ ವಿದ್ವಾಂಸರು ಮತ್ತು ಹೆಚ್ಚು ವಿದ್ಯೆಯಿಲ್ಲದೆ ಇರುವಂಥವರು ಎಂಬ ದೂರವನ್ನು ಕಲ್ಪಿಸುವುದು ಕಲೆಗೂ ಒಳ್ಳೆಯದಲ್ಲ. ಜನರಿಗೂ ಒಳ್ಳೆಯದಲ್ಲ. ನಿಜವಾದ ಕಲೆ ಎಲ್ಲರಿಗೂ ಏಕ ಸಮಾನವಾಗಿ ಮುಟ್ಟಬೇಕು’ ಎಂದರು.</p>.<p>ಪುಸ್ತಕ ಹೊರ ತಂದಿದ್ದಕ್ಕೆ ಸಂಪಾದಕ ತಂಡ, ಪ್ರಕಾಶಕರನ್ನು ಅಭಿನಂದಿಸಿದ ಭೈರಪ್ಪ, ‘ಮುನ್ನುಡಿಯನ್ನು ಬರೆದಿರುವ ಗುರುದತ್ತರೇ ಇದನ್ನು ಬರೆದಿರುವುದರಿಂದ ಸಮಗ್ರವಾಗಿ ಇದ್ದೇ ಇರುತ್ತದೆ’ ಎಂದು ಹೇಳಿದರು.</p>.<p>ಪ್ರತಿಗಳಿಗಾಗಿ ಸಂಸ್ಕೃತಿ ಬುಕ್ ಪ್ಯಾರಡೈಸ್, ಮೈಸೂರು, 9886175010 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಸಾಹಿತಿ ಎಸ್.ಎಲ್.ಭೈರಪ್ಪ ಅವರಿಗೆ ತೊಂಬತ್ತು ವರ್ಷ ತುಂಬಿದ ಸಂದರ್ಭದಲ್ಲಿ ‘ನಮ್ಮ ಭೈರಪ್ಪನವರು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.</p>.<p>ದೇಶ–ವಿದೇಶದಲ್ಲಿರುವ ಓದುಗರು, ಒಡನಾಡಿಗಳು ತಮ್ಮ ಮೇಲೆ ಭೈರಪ್ಪನವರ ಸಾಹಿತ್ಯ ಬೀರಿದ ಪ್ರಭಾವಗಳ ಕುರಿತು ಬರೆದಿರುವ ಆತ್ಮೀಯ ಲೇಖನಗಳ ಗುಚ್ಚವೇ ಈ ಪುಸ್ತಕ.</p>.<p>ಭೈರಪ್ಪ ನಿವಾಸದಲ್ಲೇ ಪುಸ್ತಕ ಬಿಡುಗಡೆ ಸಮಾರಂಭ ಸರಳವಾಗಿ ನಡೆಯಿತು. ವಿದ್ವಾಂಸರಾದ ಡಾ.ಪ್ರಧಾನ ಗುರುದತ್, ಸಂಪಾದಕಿ ಎಂ.ಎಸ್.ವಿಜಯಾಹರನ್, ಲೇಖಕ ಸಂಸ್ಕೃತಿ ಸುಬ್ರಹ್ಮಣ್ಯ, ಪ್ರಕಾಶಕ ಶ್ರೀನಿಧಿ ಸುಬ್ರಹ್ಮಣ್ಯ ಪಾಲ್ಗೊಂಡಿದ್ದರು.</p>.<p>ಪುಸ್ತಕದ ಮೊದಲ ಪ್ರತಿ ಸ್ವೀಕರಿಸಿದ ಬಳಿಕ ಭೈರಪ್ಪನವರು ಮಾತನಾಡಿ, ‘ಕಲೆಯಲ್ಲಿ ವಿದ್ವಾಂಸರು ಮತ್ತು ಹೆಚ್ಚು ವಿದ್ಯೆಯಿಲ್ಲದೆ ಇರುವಂಥವರು ಎಂಬ ದೂರವನ್ನು ಕಲ್ಪಿಸುವುದು ಕಲೆಗೂ ಒಳ್ಳೆಯದಲ್ಲ. ಜನರಿಗೂ ಒಳ್ಳೆಯದಲ್ಲ. ನಿಜವಾದ ಕಲೆ ಎಲ್ಲರಿಗೂ ಏಕ ಸಮಾನವಾಗಿ ಮುಟ್ಟಬೇಕು’ ಎಂದರು.</p>.<p>ಪುಸ್ತಕ ಹೊರ ತಂದಿದ್ದಕ್ಕೆ ಸಂಪಾದಕ ತಂಡ, ಪ್ರಕಾಶಕರನ್ನು ಅಭಿನಂದಿಸಿದ ಭೈರಪ್ಪ, ‘ಮುನ್ನುಡಿಯನ್ನು ಬರೆದಿರುವ ಗುರುದತ್ತರೇ ಇದನ್ನು ಬರೆದಿರುವುದರಿಂದ ಸಮಗ್ರವಾಗಿ ಇದ್ದೇ ಇರುತ್ತದೆ’ ಎಂದು ಹೇಳಿದರು.</p>.<p>ಪ್ರತಿಗಳಿಗಾಗಿ ಸಂಸ್ಕೃತಿ ಬುಕ್ ಪ್ಯಾರಡೈಸ್, ಮೈಸೂರು, 9886175010 ಸಂಪರ್ಕಿಸಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>