ರಂಗರಾವ್ ಸ್ಮಾರಕ ಅಂಗವಿಕಲರ ಶಾಲೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ ಗಾಯನ ನೃತ್ಯ ಇರಲಿದೆ. ಕೇರ್ಗಳ್ಳಿಯ ಕಸ್ತೂರ್ಬಾ ಗಾಂಧಿ ಬಾಲಿಕಾ ಶಾಲೆ ವಿದ್ಯಾರ್ಥಿಗಳಿಂದ ಸಾವಿತ್ರಿಯ ಸವಾಲು ನಾಟಕ, ಕಡಕೊಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ವೀರ ಅಭಿಮನ್ಯು ನಾಟಕ, ರಾಮಕೃಷ್ಣ ನಗರದ ನೃಪತುಂಗ ಕನ್ನಡ ಶಾಲೆ ವಿದ್ಯಾರ್ಥಿಗಳಿಂದ ತಟ್ಟಿರಿ ಚಪ್ಪಾಳೆ, ದೊಡ್ಡ ಮಕ್ಕಳೇ ನಾಟಕ, ಗೋಪಾಲಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪಂಜರ ಶಾಲೆ ನಾಟಕದ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.