‘ಸಾವಿರಾರು ವರ್ಷಗಳ ಇತಿಹಾಸವಿರುವ ಚಾಮುಂಡಿ ಬೆಟ್ಟದ ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತಿದೆ. ಬೆಟ್ಟದ ಸುತ್ತಲು ತಾವರೆಕಟ್ಟೆ ಕೆರೆ, ಕಾರಂಜಿ ಕೆರೆ, ಗೊಬ್ಬಳಿಕಟ್ಟೆ ಕೆರೆ, ಉತ್ತನಹಳ್ಳಿ ಕೆರೆ, ಅಪರಂಜಿ ಕೆರೆ, ದಳವಾಯಿ ಕೆರೆಗಳಿವೆ. ಆದರೆ, ಈ ಕೆರೆಗಳಿಗೆ ಈಗ ನೀರಿನ ಮೂಲಗಳೇ ಇಲ್ಲ. ಈ ಮೂಲಗಳನ್ನು ಪತ್ತೆ ಮಾಡಿ ಪುನರುಜ್ಜೀವನಗೊಳಿಸಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.