ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಕುರಿತು ವದಂತಿ; ಭೀತಿಗೊಳ್ಳದಿರಲು ಮನವಿ

Last Updated 5 ಜುಲೈ 2021, 4:37 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಚಿರತೆಗಳು ಅಲೆಯುತ್ತಿವೆ ಎಂಬ ವದಂತಿಯನ್ನು ನಂಬಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

‘ಜೆ.ಪಿ.ನಗರದ ಸಮೀಪ ಸೇತುವೆಯೊಂದರ ಮೇಲೆ ಚಿರತೆಯೊಂದು ನಡೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದ್ದು, ಇದು ಮೈಸೂರಿನ ವಿಡಿಯೊ ಅಲ್ಲ’ ಎಂದು ಡಿಸಿಎಫ್ ಪ್ರಶಾಂತ್‌ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

‘ಇಲ್ಲಿನ ಬೆಮಲ್‌ ಆವರಣದಲ್ಲಿ ಇರಿಸಿದ್ದ ಬೋನಿಗೆ ಒಂದೂವರೆ ವರ್ಷದ ಹೆಣ್ಣು ಚಿರತೆಯು ಶುಕ್ರವಾರ ಬಿದ್ದಿದೆ. ಇದನ್ನು ಬಿಟ್ಟರೆ ಜೆ.ಪಿ.ನಗರದಲ್ಲಿ ಚಿರತೆ ಕಾಣಿಸಿರುವ ಮಾಹಿತಿ ಲಭಿಸಿಲ್ಲ’ ಎಂದು ವಲಯ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT