ಅಂತರಸಂತೆಯಲ್ಲಿ ಒಂದು ಹೊರಠಾಣೆ ಇದೆ. ಆದರೆ, ಅದು ಕೂಡ ಡಿ.ಬಿ.ಕುಪ್ಪೆಗೆ 35 ಕಿ.ಮೀ ದೂರದಲ್ಲಿದೆ. ದೂರು ದಾಖಲಿಸಬೇಕಾದರೆ 53 ಕಿ.ಮೀ ದೂರದಲ್ಲಿರುವ ಬೀಚನಹಳ್ಳಿ ಠಾಣೆಗೆ ಜನರು ಬರಬೇಕಿದೆ. ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಗಡಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇದೆ. ಈ ಅವಧಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗುವುದಿಲ್ಲ.