‘ಹೆಗ್ಗಣ, ಹಾವು, ಚೇಳು, ಕ್ರಿಮಿಕೀಟಗಳ ನಡುವೆ ಬದುಕು ನಡೆದಿದ. ಮಳೆಗಾಲದಲ್ಲಿ ಮನೆ ಸುತ್ತ ನೀರು ತುಂಬಿಕೊಂಡು ಆರೋಗ್ಯ ಕೆಡುತ್ತಿದೆ. ಹೊಸ ಮನೆಯ ಭರವಸೆ ನೀಡಿದ ಸರ್ಕಾರ ಮಾತ್ರ 2 ವರ್ಷವಾದರೂ ತಳಪಾಯವನ್ನೂ ಹಾಕಿಲ್ಲ. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ, ಮನೆಗಳ ದುರಸ್ತಿಗೆಂದು ₹ 50 ಸಾವಿರ ಚೆಕ್ ನೀಡಿ, ಮಾಂಸ, ಮದ್ಯ ಸೇವಿಸಿ ಹಣ ಕಳೆದುಬಿಡುತ್ತೀರಿ ಎಂದು ವಾಪಸ್ ಪಡೆದುಕೊಂಡರು. ಹೊಸ ಮನೆ ನಿರ್ಮಿಸಿಕೊಡಲೂ ಇಲ್ಲ’ ಎಂದು ಕಣ್ಣಿರು ಹಾಕಿದರು.