ಗುರುವಾರ ಸಂಜೆ ಅವರು ಚಾಮುಂಡಿಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು, ಮಂಗಳಾರತಿ ತೆಗೆದುಕೊಳ್ಳುವಾಗ ಮುಂಗೈನಲ್ಲಿದ್ದ ಕ್ವಾರಂಟೈನ್ ಸೀಲ್ ಅನ್ನು ಅರ್ಚಕರು ಗಮನಿಸಿ, ಸಮೀಪದಲ್ಲೇ ಇದ್ದ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಅವರು ‘ನನಗೆ ನೆಗೆಟಿವ್ ಬಂದಿದೆ. ನಾನು ಕ್ವಾರಂಟೈನ್ನಲ್ಲಿ ಇರುವ ಅಗತ್ಯ ಇಲ್ಲ’ ಎಂದು ಉದ್ದಟತನದ ಉತ್ತರ ಕೊಟ್ಟಿದ್ದಾರೆ. ಹೀಗಾಗಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 269 (ಜೀವಕ್ಕೆ ಅಪಾಯಕಾರಿಯಾದ ರೋಗವನ್ನು ನಿರ್ಲಕ್ಷ್ಯದಿಂದ ಹರಡುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕೆ.ಆರ್.ಠಾಣೆಯಲ್ಲಿ ದಾಖಲಾಗಿದೆ.