<p><strong>ಜಯಪುರ:</strong> ಹೋಬಳಿಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಡವಾಗಿ ಬಿತ್ತನೆ ಮಾಡಿರುವ ರೈತರಿಗೆ ವರದಾನವಾದರೆ, ಈಗಾಗಲೇ ರಾಗಿ ಕೊಯ್ಲು ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಬೀರಿಹುಂಡಿ, ಜಯಪುರ, ಮಾರ್ಬಳ್ಳಿ, ಶ್ರೀರಾಂಪುರ, ಹಾರೋಹಳ್ಳಿ, ಉದ್ಬೂರು, ಮದ್ದೂರು, ದೊಡ್ಡಕಾನ್ಯ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ 3.4 ಸೆಂ.ಮೀ ಮಳೆಯಾಗಿದ್ದು ಹಲವೆಡೆ ಭಾರಿ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿವೆ.</p>.<p>ಮಾರ್ಬಳ್ಳಿ ಗ್ರಾಮದಲ್ಲಿ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆ ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಕಷ್ಟ ಕಾಲದಲ್ಲೂ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದೆ ಎಂದು ಮಾರ್ಬಳ್ಳಿ ರೈತ ಕುಮಾರ್ ಸಮಸ್ಯೆ ಹೇಳಿದರು.</p>.<p>ಹಿಂಗಾರು ಮಳೆಯ ಅಬ್ಬರಕ್ಕೆ ತೊಗರಿಬೆಳೆ, ಅವರೆ ಮುಂತಾದ ಬೆಳೆಗಳು ಚೇತರಿಕೆ ಪಡೆದುಕೊಂಡಿವೆ. ರೈತರು ಮಳೆಯಾಶ್ರಿತವಾಗಿಯೆ ಟೊಮೊಟೊ ಸಸಿಗಳನ್ನು ನಾಟಿ ಮಾಡಿದ್ದಾರೆ. ಬೆಂಡೇಕಾಯಿ, ಬೀನ್ಸ್ ಬೀಜಗಳನ್ನು ಹಾಕಿದ್ದಾರೆ.</p>.<p>ಶುಕ್ರವಾರವೂ ಸಂಜೆಯ ವೇಳೆಗೆ ಆರಂಭವಾದ ಮಳೆಯು, ಸತತವಾಗಿ ಸುರಿಯತ್ತಿದ್ದು, ಹಳ್ಳಕೊಳ್ಳಗಳು ತುಂಬಿಕೊಂಡಿದ್ದು, ಜಮೀನುಗಳಲ್ಲಿ ನೀರು ನಿಂತಿದೆ. ಜಯಪುರ ಗ್ರಾಮವೊಂದರ ತೆಂಗಿನ ಮತ್ತು ಬಾಳೆ ತೋಟಗಳಲ್ಲಿ ಸತತ ಮಳೆಗೆ ನೀರು ನಿಂತು ತೇವಾಂಶ ಹೆಚ್ಚಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಯಪುರ:</strong> ಹೋಬಳಿಯಾದ್ಯಂತ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಡವಾಗಿ ಬಿತ್ತನೆ ಮಾಡಿರುವ ರೈತರಿಗೆ ವರದಾನವಾದರೆ, ಈಗಾಗಲೇ ರಾಗಿ ಕೊಯ್ಲು ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಬೀರಿಹುಂಡಿ, ಜಯಪುರ, ಮಾರ್ಬಳ್ಳಿ, ಶ್ರೀರಾಂಪುರ, ಹಾರೋಹಳ್ಳಿ, ಉದ್ಬೂರು, ಮದ್ದೂರು, ದೊಡ್ಡಕಾನ್ಯ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ 3.4 ಸೆಂ.ಮೀ ಮಳೆಯಾಗಿದ್ದು ಹಲವೆಡೆ ಭಾರಿ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಬಿರುಗಾಳಿ ಸಹಿತ ಭಾರಿ ಮಳೆಗೆ ಧರೆಗುರುಳಿವೆ.</p>.<p>ಮಾರ್ಬಳ್ಳಿ ಗ್ರಾಮದಲ್ಲಿ ತರಕಾರಿ ಬೆಳೆಗಳು, ತೋಟಗಾರಿಕೆ ಬೆಳೆ ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಕಷ್ಟ ಕಾಲದಲ್ಲೂ ಬೆಳೆಗಳಿಗೆ ಅಪಾರ ಹಾನಿಯುಂಟಾಗಿದೆ ಎಂದು ಮಾರ್ಬಳ್ಳಿ ರೈತ ಕುಮಾರ್ ಸಮಸ್ಯೆ ಹೇಳಿದರು.</p>.<p>ಹಿಂಗಾರು ಮಳೆಯ ಅಬ್ಬರಕ್ಕೆ ತೊಗರಿಬೆಳೆ, ಅವರೆ ಮುಂತಾದ ಬೆಳೆಗಳು ಚೇತರಿಕೆ ಪಡೆದುಕೊಂಡಿವೆ. ರೈತರು ಮಳೆಯಾಶ್ರಿತವಾಗಿಯೆ ಟೊಮೊಟೊ ಸಸಿಗಳನ್ನು ನಾಟಿ ಮಾಡಿದ್ದಾರೆ. ಬೆಂಡೇಕಾಯಿ, ಬೀನ್ಸ್ ಬೀಜಗಳನ್ನು ಹಾಕಿದ್ದಾರೆ.</p>.<p>ಶುಕ್ರವಾರವೂ ಸಂಜೆಯ ವೇಳೆಗೆ ಆರಂಭವಾದ ಮಳೆಯು, ಸತತವಾಗಿ ಸುರಿಯತ್ತಿದ್ದು, ಹಳ್ಳಕೊಳ್ಳಗಳು ತುಂಬಿಕೊಂಡಿದ್ದು, ಜಮೀನುಗಳಲ್ಲಿ ನೀರು ನಿಂತಿದೆ. ಜಯಪುರ ಗ್ರಾಮವೊಂದರ ತೆಂಗಿನ ಮತ್ತು ಬಾಳೆ ತೋಟಗಳಲ್ಲಿ ಸತತ ಮಳೆಗೆ ನೀರು ನಿಂತು ತೇವಾಂಶ ಹೆಚ್ಚಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>