ಬೆಳಿಗ್ಗೆ 7.30ರಿಂದ 11.30 ಹಾಗೂ ಸಂಜೆ 4.30ರಿಂದ ರಾತ್ರಿ 8ರವರೆಗೆ ಮಾತ್ರ ಕಾರ್ಯನಿರ್ವಹಿಸುವ ಮೂಲಕ ಅತ್ಯಂತ ಶಿಸ್ತುಬದ್ಧವಾದ ಹೋಟೆಲ್ ಎಂಬ ಖ್ಯಾತಿ ಇದಕ್ಕಿತ್ತು. ನಟರಾದ ರಾಜಕುಮಾರ್, ಅಂಬರೀಷ್ ಸೇರಿದಂತೆ ಚಿತ್ರರಂಗದ ಪ್ರಮುಖರು ಹಾಗೂ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪ, ಸಿದ್ದರಾಮಯ್ಯ ಸಹ ಈ ಹೋಟೆಲ್ನ ಸಮಯಕ್ಕೆ ತಕ್ಕಂತೆ ಬಂದು ಆಹಾರ ಸೇವಿಸಿ ಹೋಗುತ್ತಿದ್ದುದು ವಿಶೇಷ ಎನಿಸಿತ್ತು.