‘ವೇತನ ನೇರ ಪಾವತಿ ಪದ್ಧತಿ ಜಾರಿಗೊಳಿಸಿದ ಬಳಿಕ, ಮೇಲುಸ್ತುವಾರಿಗಳಾದ್ದವರನ್ನು ಪೌರಕಾರ್ಮಿಕರಾಗಿ ಕೆಲಸ ಮಾಡುವಂತೆ ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಮೈಸೂರು ನಗರದಲ್ಲಿ 125 ಮಂದಿಮೇಲುಸ್ತುವಾರಿಗಳು ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಬಿಬಿಎಂಪಿ ಮಾದರಿಯಲ್ಲಿ ಮೇಲುಸ್ತುವಾರಿ ಹುದ್ದೆಯಲ್ಲೇ ಮುಂದುವರಿಸಿ ಭತ್ಯೆ ನೀಡಬೇಕು. ಇಲ್ಲದಿದ್ದರೆ ದಸರಾ ಮಹೋತ್ಸವ ಬಹಿಷ್ಕರಿಸಬೇಕಾಗುತ್ತದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.