<p><strong>ಮೈಸೂರು</strong>: ಪ್ರಸ್ತುತ ಸಂಶೋಧಕರ ಸಂಖ್ಯೆ ಕಡಿಮೆಯಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲೂ ಗಂಭೀರವಾದ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಕುಂದೂರು ಮಠದ ಡಾ.ಶರತ್ಚಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಇಲ್ಲಿನ ನಟರಾಜ ಸಭಾಭವನದಲ್ಲಿ ಭಾನುವಾರ ನಡೆದ ‘ಬಸವಾನುಭವ ಚಿಂತನೆ’ ಮಾಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ ಸೇರಿದಂತೆ ಅನೇಕ ಹಿರಿಯ ಸಂಶೋಧಕರು ಈಗ ಇಲ್ಲ. ಇವರ ಸ್ಥಾನವನ್ನು ತುಂಬುವ ಸಮರ್ಥರೂ ಕಾಣಿಸುತ್ತಿಲ್ಲ. ಸಂಶೋಧನಾ ಕ್ಷೇತ್ರ ಕಳೆಗುಂದುತ್ತಿದೆ. ಯುವ ಸಮುದಾಯ ಸಂಶೋಧನೆಯತ್ತ ಒಲವು ತೋರಬೇಕು ಎಂದು ಕರೆ ನೀಡಿದರು.</p>.<p>ಪ್ರಾಚೀನತೆಯಿಂದ ಯಾವುದೇ ಧರ್ಮ ದೊಡ್ಡದಾಗಲು ಸಾಧ್ಯವಿಲ್ಲ. ಸತ್ವದಿಂದ ಮಾತ್ರ ಧರ್ಮ ದೊಡ್ಡದಾಗುತ್ತದೆ. ಅತ್ಯಂತ ಪ್ರಾಚೀನ ಧರ್ಮ ಎನಿಸಿದ ಮಾತ್ರಕ್ಕೆ ಯಾವುದೇ ಧರ್ಮ ಶ್ರೇಷ್ಠವಾಗುವುದಿಲ್ಲ ಎಂದು ಹೇಳಿದರು.</p>.<p>ಇದೇ ಬಗೆಯಾದ ಪ್ರಾಚೀನತೆ ಚಪಲತೆಯಿಂದ ಕೆಲವು ಸಂಶೋಧಕರು ಪುರಾಣಗಳಲ್ಲಿನ ಅಂಶಗಳನ್ನು ಬರೆದರು. ಅವರ ಹಿಂಬಾಲಕರು ಇವೇ ಸತ್ಯವೆಂದು ಪ್ರಚಾರ ಮಾಡಿದರು ಎಂದರು.</p>.<p>ವೀರಶೈವ ಧರ್ಮವನ್ನು ಶಿವ ಸ್ಥಾಪಿಸಿದ, ಪಂಚಾಚಾರ್ಯರು ಪಾಲಿಸಿದರು ಎಂದು ಕೆಲವೆಡೆ ಹೇಳಿದರೆ, ಮತ್ತೆ ಕೆಲವೆಡೆ ಪಂಚಾಚಾರ್ಯರು ಸ್ಥಾಪಿಸಿದರು ಎಂದಿದೆ. ಈ ರೀತಿಯ ಅನೇಕ ಗೊಂದಲಗಳು ಇಂದಿಗೂ ಇವೆ ಎಂದು ಹೇಳಿದರು.</p>.<p>ಡಾ.ಎಸ್.ಎಂ.ಜಾಮದಾರ ಅವರು ಬರೆದು ಗೊ.ರು.ಚನ್ನಬಸಪ್ಪ ಅವರು ಕನ್ನಡಕ್ಕೆ ತಂದಿರುವ ವೀರಶೈವ ಧರ್ಮವು 12ನೇ ‘ಶತಮಾನಕ್ಕಿಂತ ಮುಂಚೆ ಅಸ್ತಿತ್ವದಲ್ಲಿತ್ತೆ?’, ‘ಲಿಂಗಾಯತರು ಮತ್ತು ವೀರಶೈವರು ಒಂದೆಯೋ ಅಥವಾ ಬೇರೆಯೋ?, ‘ಲಿಂಗಾಯತರು ಹಿಂದೂಗಳೇ’, ‘ಲಿಂಗಾಯತ ಹೋರಾಟ’ ಕೃತಿಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.</p>.<p>ಹೊಸಮಠದ ಚಿದಾನಂದಸ್ವಾಮೀಜಿ, ಬೇಲಿಮಠದ ಶಿವರುದ್ರಸ್ವಾಮೀಜಿ, ನೀಲಕಂಠ ಮಠದ ಸಿದ್ಧಮಲ್ಲಸ್ವಾಮೀಜಿ, ಲೇಖಕರಾದ ಎಲ್.ಶಿವಲಿಂಗಪ್ಪ, ದೇವರಾಜ ಚಿಕ್ಕಹಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಮಹಾದೇವಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಪ್ರಸ್ತುತ ಸಂಶೋಧಕರ ಸಂಖ್ಯೆ ಕಡಿಮೆಯಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲೂ ಗಂಭೀರವಾದ ಸಂಶೋಧನೆಗಳು ನಡೆಯುತ್ತಿಲ್ಲ ಎಂದು ಕುಂದೂರು ಮಠದ ಡಾ.ಶರತ್ಚಂದ್ರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.</p>.<p>ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ಇಲ್ಲಿನ ನಟರಾಜ ಸಭಾಭವನದಲ್ಲಿ ಭಾನುವಾರ ನಡೆದ ‘ಬಸವಾನುಭವ ಚಿಂತನೆ’ ಮಾಸಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಚಿದಾನಂದಮೂರ್ತಿ, ಎಂ.ಎಂ.ಕಲಬುರ್ಗಿ ಸೇರಿದಂತೆ ಅನೇಕ ಹಿರಿಯ ಸಂಶೋಧಕರು ಈಗ ಇಲ್ಲ. ಇವರ ಸ್ಥಾನವನ್ನು ತುಂಬುವ ಸಮರ್ಥರೂ ಕಾಣಿಸುತ್ತಿಲ್ಲ. ಸಂಶೋಧನಾ ಕ್ಷೇತ್ರ ಕಳೆಗುಂದುತ್ತಿದೆ. ಯುವ ಸಮುದಾಯ ಸಂಶೋಧನೆಯತ್ತ ಒಲವು ತೋರಬೇಕು ಎಂದು ಕರೆ ನೀಡಿದರು.</p>.<p>ಪ್ರಾಚೀನತೆಯಿಂದ ಯಾವುದೇ ಧರ್ಮ ದೊಡ್ಡದಾಗಲು ಸಾಧ್ಯವಿಲ್ಲ. ಸತ್ವದಿಂದ ಮಾತ್ರ ಧರ್ಮ ದೊಡ್ಡದಾಗುತ್ತದೆ. ಅತ್ಯಂತ ಪ್ರಾಚೀನ ಧರ್ಮ ಎನಿಸಿದ ಮಾತ್ರಕ್ಕೆ ಯಾವುದೇ ಧರ್ಮ ಶ್ರೇಷ್ಠವಾಗುವುದಿಲ್ಲ ಎಂದು ಹೇಳಿದರು.</p>.<p>ಇದೇ ಬಗೆಯಾದ ಪ್ರಾಚೀನತೆ ಚಪಲತೆಯಿಂದ ಕೆಲವು ಸಂಶೋಧಕರು ಪುರಾಣಗಳಲ್ಲಿನ ಅಂಶಗಳನ್ನು ಬರೆದರು. ಅವರ ಹಿಂಬಾಲಕರು ಇವೇ ಸತ್ಯವೆಂದು ಪ್ರಚಾರ ಮಾಡಿದರು ಎಂದರು.</p>.<p>ವೀರಶೈವ ಧರ್ಮವನ್ನು ಶಿವ ಸ್ಥಾಪಿಸಿದ, ಪಂಚಾಚಾರ್ಯರು ಪಾಲಿಸಿದರು ಎಂದು ಕೆಲವೆಡೆ ಹೇಳಿದರೆ, ಮತ್ತೆ ಕೆಲವೆಡೆ ಪಂಚಾಚಾರ್ಯರು ಸ್ಥಾಪಿಸಿದರು ಎಂದಿದೆ. ಈ ರೀತಿಯ ಅನೇಕ ಗೊಂದಲಗಳು ಇಂದಿಗೂ ಇವೆ ಎಂದು ಹೇಳಿದರು.</p>.<p>ಡಾ.ಎಸ್.ಎಂ.ಜಾಮದಾರ ಅವರು ಬರೆದು ಗೊ.ರು.ಚನ್ನಬಸಪ್ಪ ಅವರು ಕನ್ನಡಕ್ಕೆ ತಂದಿರುವ ವೀರಶೈವ ಧರ್ಮವು 12ನೇ ‘ಶತಮಾನಕ್ಕಿಂತ ಮುಂಚೆ ಅಸ್ತಿತ್ವದಲ್ಲಿತ್ತೆ?’, ‘ಲಿಂಗಾಯತರು ಮತ್ತು ವೀರಶೈವರು ಒಂದೆಯೋ ಅಥವಾ ಬೇರೆಯೋ?, ‘ಲಿಂಗಾಯತರು ಹಿಂದೂಗಳೇ’, ‘ಲಿಂಗಾಯತ ಹೋರಾಟ’ ಕೃತಿಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.</p>.<p>ಹೊಸಮಠದ ಚಿದಾನಂದಸ್ವಾಮೀಜಿ, ಬೇಲಿಮಠದ ಶಿವರುದ್ರಸ್ವಾಮೀಜಿ, ನೀಲಕಂಠ ಮಠದ ಸಿದ್ಧಮಲ್ಲಸ್ವಾಮೀಜಿ, ಲೇಖಕರಾದ ಎಲ್.ಶಿವಲಿಂಗಪ್ಪ, ದೇವರಾಜ ಚಿಕ್ಕಹಳ್ಳಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಮಹಾದೇವಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>