<p><strong>ವರುಣಾ:</strong> ಬೆಂಗಳೂರಿನ ಕೇಂದ್ರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಆಗಿದ್ದ ನಾಗಪ್ಪ ನಿವೃತ್ತಿ ಬಳಿಕ ನೈಸರ್ಗಿಕ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.</p>.<p>ನಾಗಣ್ಣ ವರುಣಾ ಸಮೀಪದ ಮೇಗಳಾಪುರ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ತೆಂಗು, ಸಪೋಟ, ಬಾಳೆ, ಮಾವು, ಪಪ್ಪಾಯ, ಚಕ್ಕೋತ, ಸೀಬೆ, ನುಗ್ಗೆ, ವೀಳ್ಯೆದೆಲೆ, ಕಿತ್ತಳೆ, ಸೀತಾಫಲ, ಹಲಸು ಬೆಳೆದಿ ದ್ದಾರೆ. ಜಾನುವಾರುಗಳ ಮೇವಿಗಾಗಿ ನೇಪಿಯರ್ ಹುಲ್ಲು ಬೆಳೆದಿದ್ದಾರೆ.</p>.<p>60ಕ್ಕೂ ಹೆಚ್ಚಿನ ತೆಂಗಿನ ಮರಗಳಿದ್ದು, ವಾರ್ಷಿಕ ₹1.20 ಲಕ್ಷ, ಸಪೋಟ ಬೆಳೆಯಿಂದ ₹60 ಸಾವಿರ, ಪಪ್ಪಾಯದಿಂದ ₹25 ಸಾವಿರ, ಬಾಳೆಯಿಂದ ₹45 ಸಾವಿರ ಆದಾಯ ಗಳಿಸುತ್ತಿದ್ದಾರೆ. ನಾಟಿ ಕೋಳಿ ಹಾಗೂ ಫಾರಂ ಕೋಳಿಗಳಿಂದ ₹2 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಹಲಸು, ಕಿತ್ತಳೆ, ಚಕ್ಕೋತ ಸಹ ಬೆಳೆದಿದ್ದಾರೆ.</p>.<p>ಸಾಹಿವಾಲ್ ತಳಿಯ ಹಸು ಸಾಕಿದ್ದಾರೆ. ಸಗಣಿ ಹಾಗೂ ಕೋಳಿ ಗೊಬ್ಬರವನ್ನು ಬೆಳೆಗಳಿಗೆ ಬಳಸುತ್ತಾರೆ.</p>.<p>ಚಾಮರಾಜನಗರ ಜಿಲ್ಲೆಯ ಯರಗನಹಳ್ಳಿ ಗ್ರಾಮದಲ್ಲಿ ಜನಿಸಿದ ನಾಗಪ್ಪ, ಬಾಲ್ಯದಿಂದಲೇ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದರು. ದನಕರು, ಕುರಿಗಳ ಪಾಲನೆಯಲ್ಲೂ ತೊಡಗಿದ್ದರು.</p>.<p>ಓದಿನಲ್ಲೂ ಮುಂದಿದ್ದ ಅವರು ಪದವಿ ಶಿಕ್ಷಣವನ್ನು ಮುಗಿಸಿ ಬ್ಯಾಂಕ್ನಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ, ಪೊಲೀಸ್ ಇಲಾಖೆಗೆ ಸೇರಿದ್ದರು. ಮೈಸೂರು, ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ಬೆಂಗಳೂರಿನ ಕೇಂದ್ರ ಸಂಚಾರ ವಿಭಾಗದ ಎಸಿಪಿಯಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.</p>.<p>ಆಸಕ್ತ ರೈತರು ನಾಗಪ್ಪ ಅವರ ಮೊಬೈಲ್ ಸಂಖ್ಯೆ 9845443459 ಸಂಪರ್ಕಿಸಬಹುದು.</p>.<p>***</p>.<p>ನಾರಾಯಣರೆಡ್ಡಿ ಅವರ ಪ್ರೇರಣೆಯಿಂದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಆದಾಯ ಗಳಿಸುತ್ತಿದ್ದೇನೆ.</p>.<p><strong>–ನಾಗಪ್ಪ, ನೈಸರ್ಗಿಕ ಕೃಷಿಕ</strong></p>.<p>***</p>.<p>ನಾಗಣ್ಣ ಅವರು ಸಮಗ್ರ ಕೃಷಿ ಮೂಲಕ ನಿರಂತರವಾಗಿ ಆದಾಯ ಪಡೆಯುತ್ತಿದ್ದಾರೆ. ಅವರು ಇತರೆ ರೈತರಿಗೆ ಮಾದರಿ</p>.<p><strong>–ಹೇಮಂತ, ವರುಣಾ ಕೃಷಿ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವರುಣಾ:</strong> ಬೆಂಗಳೂರಿನ ಕೇಂದ್ರ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಆಗಿದ್ದ ನಾಗಪ್ಪ ನಿವೃತ್ತಿ ಬಳಿಕ ನೈಸರ್ಗಿಕ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.</p>.<p>ನಾಗಣ್ಣ ವರುಣಾ ಸಮೀಪದ ಮೇಗಳಾಪುರ ಗ್ರಾಮದ ತಮ್ಮ ಎರಡು ಎಕರೆ ಜಮೀನಿನಲ್ಲಿ ತೆಂಗು, ಸಪೋಟ, ಬಾಳೆ, ಮಾವು, ಪಪ್ಪಾಯ, ಚಕ್ಕೋತ, ಸೀಬೆ, ನುಗ್ಗೆ, ವೀಳ್ಯೆದೆಲೆ, ಕಿತ್ತಳೆ, ಸೀತಾಫಲ, ಹಲಸು ಬೆಳೆದಿ ದ್ದಾರೆ. ಜಾನುವಾರುಗಳ ಮೇವಿಗಾಗಿ ನೇಪಿಯರ್ ಹುಲ್ಲು ಬೆಳೆದಿದ್ದಾರೆ.</p>.<p>60ಕ್ಕೂ ಹೆಚ್ಚಿನ ತೆಂಗಿನ ಮರಗಳಿದ್ದು, ವಾರ್ಷಿಕ ₹1.20 ಲಕ್ಷ, ಸಪೋಟ ಬೆಳೆಯಿಂದ ₹60 ಸಾವಿರ, ಪಪ್ಪಾಯದಿಂದ ₹25 ಸಾವಿರ, ಬಾಳೆಯಿಂದ ₹45 ಸಾವಿರ ಆದಾಯ ಗಳಿಸುತ್ತಿದ್ದಾರೆ. ನಾಟಿ ಕೋಳಿ ಹಾಗೂ ಫಾರಂ ಕೋಳಿಗಳಿಂದ ₹2 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಹಲಸು, ಕಿತ್ತಳೆ, ಚಕ್ಕೋತ ಸಹ ಬೆಳೆದಿದ್ದಾರೆ.</p>.<p>ಸಾಹಿವಾಲ್ ತಳಿಯ ಹಸು ಸಾಕಿದ್ದಾರೆ. ಸಗಣಿ ಹಾಗೂ ಕೋಳಿ ಗೊಬ್ಬರವನ್ನು ಬೆಳೆಗಳಿಗೆ ಬಳಸುತ್ತಾರೆ.</p>.<p>ಚಾಮರಾಜನಗರ ಜಿಲ್ಲೆಯ ಯರಗನಹಳ್ಳಿ ಗ್ರಾಮದಲ್ಲಿ ಜನಿಸಿದ ನಾಗಪ್ಪ, ಬಾಲ್ಯದಿಂದಲೇ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದರು. ದನಕರು, ಕುರಿಗಳ ಪಾಲನೆಯಲ್ಲೂ ತೊಡಗಿದ್ದರು.</p>.<p>ಓದಿನಲ್ಲೂ ಮುಂದಿದ್ದ ಅವರು ಪದವಿ ಶಿಕ್ಷಣವನ್ನು ಮುಗಿಸಿ ಬ್ಯಾಂಕ್ನಲ್ಲಿ ಕೆಲಸಕ್ಕೆ ಸೇರಿದ್ದರು. ಬಳಿಕ, ಪೊಲೀಸ್ ಇಲಾಖೆಗೆ ಸೇರಿದ್ದರು. ಮೈಸೂರು, ಬೆಂಗಳೂರಿನಲ್ಲಿ ಕೆಲಸ ಮಾಡಿದ್ದರು. ಬೆಂಗಳೂರಿನ ಕೇಂದ್ರ ಸಂಚಾರ ವಿಭಾಗದ ಎಸಿಪಿಯಾಗಿದ್ದರು. ಎರಡು ಬಾರಿ ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾಗಿದ್ದಾರೆ.</p>.<p>ಆಸಕ್ತ ರೈತರು ನಾಗಪ್ಪ ಅವರ ಮೊಬೈಲ್ ಸಂಖ್ಯೆ 9845443459 ಸಂಪರ್ಕಿಸಬಹುದು.</p>.<p>***</p>.<p>ನಾರಾಯಣರೆಡ್ಡಿ ಅವರ ಪ್ರೇರಣೆಯಿಂದ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಆದಾಯ ಗಳಿಸುತ್ತಿದ್ದೇನೆ.</p>.<p><strong>–ನಾಗಪ್ಪ, ನೈಸರ್ಗಿಕ ಕೃಷಿಕ</strong></p>.<p>***</p>.<p>ನಾಗಣ್ಣ ಅವರು ಸಮಗ್ರ ಕೃಷಿ ಮೂಲಕ ನಿರಂತರವಾಗಿ ಆದಾಯ ಪಡೆಯುತ್ತಿದ್ದಾರೆ. ಅವರು ಇತರೆ ರೈತರಿಗೆ ಮಾದರಿ</p>.<p><strong>–ಹೇಮಂತ, ವರುಣಾ ಕೃಷಿ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>