ಶುಕ್ರವಾರ ಬೆಳಿಗ್ಗೆಯೇ ಬೆಟ್ಟಕ್ಕೆ ಭೇಟಿ ನೀಡಿದ ಸಾ.ರಾ.ಮಹೇಶ್ ದೇವಿ ಸನ್ನಿಧಿಯಲ್ಲಿ ಕೆಲ ಹೊತ್ತು ಮೌನವಾಗಿದ್ದರು. ಧ್ಯಾನಸ್ಥರಾಗಿ ಪ್ರಾರ್ಥಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ‘ಸತ್ಯಾಸತ್ಯತೆಯನ್ನು ಅಮ್ಮನೇ ತೀರ್ಮಾನ ಮಾಡ್ತಾಳೆ. ಎಷ್ಟೇ ದೊಡ್ಡವರಾಗಿದ್ದರೂ ಆತ್ಮಸಾಕ್ಷಿಯೇ ಮುಖ್ಯ. ಅದಕ್ಕೆ ನೋವಾಗಿದ್ದಕ್ಕೆ ತಾಯಿ ಸನ್ನಿಧಿಗೆ ಬಂದು ಕ್ಷಮೆ ಕೋರಿದೆ. ಇದೇ ಸಂದರ್ಭ ರಾಜ್ಯದ ಜನರ ಕ್ಷಮೆಯನ್ನು ಕೋರುವೆ’ ಎಂದು ಪ್ರತಿಕ್ರಿಯಿಸಿದರು.