ತ್ರಿಪುರದ ಅಗರ್ತಲಾದಲ್ಲಿ ನ.24ರಿಂದ 27ರ ವರೆಗೆ ವರ್ಚುವಲ್ ವೇದಿಕೆ ಮೂಲಕ ನಡೆಯಲಿರುವ ಚಲನಚಿತ್ರೋತ್ಸವದಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಮಾನಸ ಗಂಗೋತ್ರಿಯಲ್ಲಿರುವ ಎಜುಕೇಷನಲ್ ಮಲ್ಡಿಮೀಡಿಯಾ ರಿಸರ್ಚ್ ಸೆಂಟರ್ (ಇಎಂಆರ್ಸಿ) ವಿಭಾಗದಲ್ಲಿ ಕಿರಿಯ ಸಂಶೋಧನಾಧಿಕಾರಿಆಗಿರುವ ಆ್ಯರನ್ ಮಾರ್ಗದರ್ಶನದಲ್ಲಿ ಈ ಸಾಕ್ಷ್ಯಚಿತ್ರ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಎಂಟು ನಿಮಿಷಗಳ ಸಾಕ್ಷ್ಯಚಿತ್ರವು ತ್ರಿಪುರದ ಜೀವವೈವಿಧ್ಯದ ಮೇಲೆ ಬೆಳಕು ಚೆಲ್ಲಿದೆ.