ಮೈಸೂರು: ‘ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದರೋ ಗೊತ್ತಿಲ್ಲ’

ಮೈಸೂರು: ‘ಸಿದ್ದರಾಮಯ್ಯ ಯಾವಾಗ ಜ್ಯೋತಿಷಿ ಆದರೋ, ಭವಿಷ್ಯ ನುಡಿಯಲು ಶುರು ಮಾಡಿದರೋ ಎಂಬುದು ನನಗೆ ಗೊತ್ತಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
‘ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂದು ಹಲವು ದಿನಗಳಿಂದ ಹೇಳುತ್ತಾ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆ ಆದ ಬಳಿಕ ಬದಲಾವಣೆ ಆಗುತ್ತದೆ ಎಂದಿದ್ದರು. ಇದೀಗ ಏಪ್ರಿಲ್ನಲ್ಲಿ ಬದಲಾವಣೆ ಅನ್ನುತ್ತಿದ್ದಾರೆ. ಆ ಬಳಿಕ ಮೇ, ಜೂನ್, ಜುಲೈ... ಹೀಗೆ ಕ್ಯಾಲೆಂಡರ್ನಲ್ಲಿರುವ ಎಲ್ಲ ತಿಂಗಳುಗಳನ್ನೂ ಹೇಳುತ್ತಾರೆ. ಅವರ ಭವಿಷ್ಯ ಎಂದೂ ನಿಜವಾಗುವುದಿಲ್ಲ’ ಎಂದು ಭಾನುವಾರ ಇಲ್ಲಿ ಕುಟುಕಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.