<p>ಮೈಸೂರು: ನಾಡಹಬ್ಬ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆ ಬುಧವಾರ ರಾತ್ರಿ ವಿಶೇಷ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.</p>.<p>ಈಚೆಗಷ್ಟೇ ಅಗಲಿದ ಗಾನ ಗಾರುಡಿಗ, ಸ್ವರ ಸಾಮ್ರಾಟ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೀತ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.</p>.<p>ಗಾಯಕ ರಾಜೇಶ್ ಕೃಷ್ಣನ್ ತಂಡದ ಕಲಾವಿದರು ಎರಡು ತಾಸಿಗೂ ಹೆಚ್ಚಿನ ಅವಧಿ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು.</p>.<p>ರಾಜೇಶ್ ಕೃಷ್ಣನ್ ಕನ್ನಡ ರೋಮಾಂಚನವೀ ಕನ್ನಡ...ಕಸ್ತೂರಿ ನುಡಿಯಿದು, ಕರುನಾಡ ಮಣ್ಣಿದು...ಕರುನಾಡ ತಾಯಿ ಸದಾ ಚಿನ್ಮಯಿ ಹಾಡುಗಳನ್ನು ಹಾಡುವ ಮೂಲಕ ಕನ್ನಡ ಪ್ರೇಮವನ್ನು ಬಡಿದೆಬ್ಬಿಸಿದರು.</p>.<p>ಗಾಯಕಿ ಅನುರಾಧಾ ಭಟ್ ಜೊತೆ, ಜೊತೆಯಲಿ, ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ... ನಗುವ ನಯನ ಮಧುರ ಮೌನ...ಕೇಳದೆ ನಿಮಗೀಗ ಹಾಡುಗಳನ್ನು ಹಾಡುವ ಮೂಲಕ ಎಸ್ಪಿಬಿ ಸ್ಮರಿಸಿದರು.</p>.<p>ಸಂಗೀತ ನಿರ್ದೇಶಕ ರಾಜನ್, ಗಾಯಕಿ ಜಾನಕಿ ಅವರನ್ನು ಸ್ಮರಿಸಿ ಹಲವು ಹಾಡುಗಳನ್ನು ಹಾಡಿದರು. ಈ ಭೂಮಿ ಬಣ್ಣದ ಬುಗುರಿ, ಪವಡಿಸು ಪರಮಾತ್ಮ, ನೂರೊಂದು ನೆನಪು ಮುಂತಾದ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ವೀಕ್ಷಕರನ್ನು ಸಂಗೀತ ಲೋಕದೊಳಗೆ ಕರೆದೊಯ್ದರು.</p>.<p>ನುಡಿ ನಮನ ಸಾರ್ಥಕ: ಎಸ್ಪಿಬಿ ನೆನಪಿನಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮವನ್ನು ಗಾಯಕ ರಾಜೇಶ್ ಕೃಷ್ಣನ್ ಸಾರ್ಥಕ ಪಡಿಸಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದರು.</p>.<p>‘ಈಚೆಗೆ ನಮ್ಮನ್ನು ಅಗಲಿದ ಎಸ್ಪಿಬಿ ಹೆಸರಿನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಬೇಕು ಎಂದು ಬಯಸಿದ್ದೆವು. ಆ ಕಾರ್ಯಕ್ರಮಕ್ಕೆ ರಾಜೇಶ್ ಕೃಷ್ಣನ್ ಅವರನ್ನೇ ಕರೆಸಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು. ನಮ್ಮ ಬಯಕೆ ಈಡೇರಿದೆ’ ಎಂದರು.</p>.<p>ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಎಲ್.ನಾಗೇಂದ್ರ ಮತ್ತಿತರರಿದ್ದರು.</p>.<p class="Briefhead"><strong>ಅರಮನೆಯಲ್ಲಿ ಸರಸ್ವತಿ ಪೂಜೆ</strong></p>.<p>ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬುಧವಾರ ವಿದ್ಯಾದೇವತೆ ಸರಸ್ವತಿಯ ಪೂಜೆ ನೆರವೇರಿಸಿದರು.</p>.<p>ನವರಾತ್ರಿಯ ಐದನೇ ದಿನ ಅರಮನೆಯ ಕನ್ನಡ ತೊಟ್ಟಿಯಲ್ಲಿ ವಿದ್ಯಾ ದೇವತೆಯಾದ ಸರಸ್ವತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ಬೆಳಿಗ್ಗೆ 9.45ರಿಂದ 10.15ರವರೆಗಿನ ಶುಭ ಮುಹೂರ್ತದಲ್ಲಿ ತಾಯಿ ಸರಸ್ವತಿಯ ಪುರಾತನ ಪೋಟೋ ಮುಂದೆ ವೀಣೆ, ಪುಸ್ತಕಗಳಿಗೆ ಯದುವೀರ್ ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ನಾಡಹಬ್ಬ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆ ಬುಧವಾರ ರಾತ್ರಿ ವಿಶೇಷ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.</p>.<p>ಈಚೆಗಷ್ಟೇ ಅಗಲಿದ ಗಾನ ಗಾರುಡಿಗ, ಸ್ವರ ಸಾಮ್ರಾಟ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೀತ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.</p>.<p>ಗಾಯಕ ರಾಜೇಶ್ ಕೃಷ್ಣನ್ ತಂಡದ ಕಲಾವಿದರು ಎರಡು ತಾಸಿಗೂ ಹೆಚ್ಚಿನ ಅವಧಿ, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು.</p>.<p>ರಾಜೇಶ್ ಕೃಷ್ಣನ್ ಕನ್ನಡ ರೋಮಾಂಚನವೀ ಕನ್ನಡ...ಕಸ್ತೂರಿ ನುಡಿಯಿದು, ಕರುನಾಡ ಮಣ್ಣಿದು...ಕರುನಾಡ ತಾಯಿ ಸದಾ ಚಿನ್ಮಯಿ ಹಾಡುಗಳನ್ನು ಹಾಡುವ ಮೂಲಕ ಕನ್ನಡ ಪ್ರೇಮವನ್ನು ಬಡಿದೆಬ್ಬಿಸಿದರು.</p>.<p>ಗಾಯಕಿ ಅನುರಾಧಾ ಭಟ್ ಜೊತೆ, ಜೊತೆಯಲಿ, ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ... ನಗುವ ನಯನ ಮಧುರ ಮೌನ...ಕೇಳದೆ ನಿಮಗೀಗ ಹಾಡುಗಳನ್ನು ಹಾಡುವ ಮೂಲಕ ಎಸ್ಪಿಬಿ ಸ್ಮರಿಸಿದರು.</p>.<p>ಸಂಗೀತ ನಿರ್ದೇಶಕ ರಾಜನ್, ಗಾಯಕಿ ಜಾನಕಿ ಅವರನ್ನು ಸ್ಮರಿಸಿ ಹಲವು ಹಾಡುಗಳನ್ನು ಹಾಡಿದರು. ಈ ಭೂಮಿ ಬಣ್ಣದ ಬುಗುರಿ, ಪವಡಿಸು ಪರಮಾತ್ಮ, ನೂರೊಂದು ನೆನಪು ಮುಂತಾದ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ವೀಕ್ಷಕರನ್ನು ಸಂಗೀತ ಲೋಕದೊಳಗೆ ಕರೆದೊಯ್ದರು.</p>.<p>ನುಡಿ ನಮನ ಸಾರ್ಥಕ: ಎಸ್ಪಿಬಿ ನೆನಪಿನಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮವನ್ನು ಗಾಯಕ ರಾಜೇಶ್ ಕೃಷ್ಣನ್ ಸಾರ್ಥಕ ಪಡಿಸಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದರು.</p>.<p>‘ಈಚೆಗೆ ನಮ್ಮನ್ನು ಅಗಲಿದ ಎಸ್ಪಿಬಿ ಹೆಸರಿನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಬೇಕು ಎಂದು ಬಯಸಿದ್ದೆವು. ಆ ಕಾರ್ಯಕ್ರಮಕ್ಕೆ ರಾಜೇಶ್ ಕೃಷ್ಣನ್ ಅವರನ್ನೇ ಕರೆಸಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು. ನಮ್ಮ ಬಯಕೆ ಈಡೇರಿದೆ’ ಎಂದರು.</p>.<p>ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಎಲ್.ನಾಗೇಂದ್ರ ಮತ್ತಿತರರಿದ್ದರು.</p>.<p class="Briefhead"><strong>ಅರಮನೆಯಲ್ಲಿ ಸರಸ್ವತಿ ಪೂಜೆ</strong></p>.<p>ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬುಧವಾರ ವಿದ್ಯಾದೇವತೆ ಸರಸ್ವತಿಯ ಪೂಜೆ ನೆರವೇರಿಸಿದರು.</p>.<p>ನವರಾತ್ರಿಯ ಐದನೇ ದಿನ ಅರಮನೆಯ ಕನ್ನಡ ತೊಟ್ಟಿಯಲ್ಲಿ ವಿದ್ಯಾ ದೇವತೆಯಾದ ಸರಸ್ವತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ಬೆಳಿಗ್ಗೆ 9.45ರಿಂದ 10.15ರವರೆಗಿನ ಶುಭ ಮುಹೂರ್ತದಲ್ಲಿ ತಾಯಿ ಸರಸ್ವತಿಯ ಪುರಾತನ ಪೋಟೋ ಮುಂದೆ ವೀಣೆ, ಪುಸ್ತಕಗಳಿಗೆ ಯದುವೀರ್ ಪೂಜೆ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>