ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯಕ್ಕೆ ಸುಧಾಮೂರ್ತಿ ಮತ್ತೆ ₹ 20 ಲಕ್ಷ ದೇಣಿಗೆ

Last Updated 1 ಅಕ್ಟೋಬರ್ 2020, 20:18 IST
ಅಕ್ಷರ ಗಾತ್ರ

ಮೈಸೂರು: ಇನ್ಫೊಸಿಸ್ ಫೌಂಡೇಷನ್‌ ಅಧ್ಯಕ್ಷೆ ಸುಧಾಮೂರ್ತಿ ಅವರು ಮೈಸೂರು ಮೃಗಾಲಯದ ಪ್ರಾಣಿ-ಪಕ್ಷಿಗಳ ಪಾಲನೆ- ಪೋಷಣೆಗಾಗಿ ಮತ್ತೆ ₹ 20 ಲಕ್ಷ ದೇಣಿಗೆ ನೀಡಿದ್ದಾರೆ.

‘ಈ ಹಿಂದೆ ಕೋವಿಡ್‌ನಿಂದ ಮೃಗಾಲಯ ಮುಚ್ಚಿದ್ದ ಅವಧಿಯಲ್ಲಿ,ಸುಧಾಮೂರ್ತಿ ಅವರು ₹ 20 ಲಕ್ಷ ನೀಡಿದ್ದರು. ಮೃಗಾಲಯದ ಬಗ್ಗೆ ಅವರಿಗಿರುವ ಅಭಿಮಾನ, ಕಾಳಜಿಯನ್ನು ಅಭಿನಂದಿಸುತ್ತೇವೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದತ್ತು ಸ್ವೀಕಾರ: ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ ಅಡಿಯಲ್ಲಿ ಬೆಂಗಳೂರಿನ ಯಶ್ಮಿಕ ಎಂಬವರು ₹ 1.75 ಲಕ್ಷ ಪಾವತಿಸಿ ‘ಏಷ್ಯಾಟಿಕ್ ಆನೆ’ಯನ್ನು ದತ್ತು ಸ್ವೀಕರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT