‘ಮೈಸೂರು ನಗರ ವಿಭಾಗದಲ್ಲಿ 370 ಬಸ್ಗಳಿವೆ. 1800 ನೌಕರರು ಮುಷ್ಕರದಿಂದ ಕರ್ತವ್ಯಕ್ಕೆ ಮರಳಿದ್ದಾರೆ. ಆದರೂ ಗುರುವಾರ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಾಗಲಿಲ್ಲ. ಮಧ್ಯಾಹ್ನದ ವೇಳೆಗೆ ಮೈಸೂರಿನಲ್ಲಿ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದವು. ಜನರು ವಹಿವಾಟಿಗಾಗಿ ಮಾರುಕಟ್ಟೆಗಳಿಗೆ ಬರದಿದ್ದರಿಂದ ಬಸ್ ಸಂಚಾರವೂ ವಿರಳವಾಯಿತು’ ಎಂದು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.